ಬಳಂಜ: ಬೋಂಟ್ರೊಟ್ಟು ಗುತ್ತು ಶ್ರೀ ದೈವಗಳ ದಾರಂದ ಪ್ರತಿಷ್ಠೆ

0

ಬಳಂಜ: ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್ (ರಿ) ಮತ್ತು ಜೀರ್ಣೋದ್ಧಾರ ಸಮಿತಿ, ಬೋಂಟ್ರೊಟ್ಟು ಬಳಂಜ ಇದರ ನೇತೃತ್ವದಲ್ಲಿ ಜು.16 ರಂದು ಬೆಳಗ್ಗೆ ಮದ್ದ ಡ್ಕ ಶ್ರೀನಿವಾಸ ಅಸ್ರಣ್ಣರ ವೈದಿಕ ನೇತೃತ್ವದಲ್ಲಿ ಶ್ರೀಧರ್ಮರಸು ಪರಿವಾರ ಶಕ್ತಿಗಳ ದೈವಸ್ಥಾನದ ದಾರಂದ ಮಹೂರ್ತ ನೆರವೇರಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಮುಖ್ಯಸ್ಥರಾದ ಮಹಾಬಲ ಪೂಜಾರಿ, ಕೃಷ್ಣಪ್ಪ ಪೂಜಾರಿ,ಸದಾನಂದ ಪೂಜಾರಿ, ಗಣೇಶ್ ಪೂಜಾರಿ ಬೋಂಟ್ರೋಟ್ಟು ಗುತ್ತು ಹಾಗೂ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್, ಕೋಶಾಧಿಕಾರಿ ಪ್ರವೀಣ್ ಕುಮಾರ್ ಎಚ್.ಎಸ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಸದಾನಂದ ಸಾಲಿಯಾನ್ ಬಳಂಜ, ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ಸತೀಶ್ ರೈ ಬಾರ್ಧಡ್ಕ,ರಮಾನಾಥ ಶೆಟ್ಟಿ ಪಂಬಾಜೆ, ಹರೀಶ್ ರೈ ಅಶೋಕ್ ಮುಡಾಯಿಬೆಟ್ಟು ಹಾಗೂ ಗುತ್ತು ಗುರಿಕಾರರು,ಅಭಿವೃದ್ಧಿ ಸಮಿತಿಯ ಸದಸ್ಯರು, ಬೋಂಟ್ರೊಟ್ಟು ಗುತ್ತು ಮನೆತನದ ಕೂಡು ಕುಟುಂಬಸ್ಥರು ಊರಿನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ದೈವಸ್ಥಾನಗಳ ಕೆಲಸ ಕಾರ್ಯಗಳು ಪ್ರಗತಿಯಲ್ಲಿದ್ದು ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಪ್ರತಿಷ್ಠಾ ಕಾರ್ಯಕ್ರಮ ಹಾಗೂ ನೇಮೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here