ಅಳದಂಗಡಿ: ಶ್ರೀ ಭಗವಾನ್ ಸಾಯಿಬಾಬಾ ಮೆಟಲ್ಸ್ ಮತ್ತು ಪೂಜಾ ಸಾಮಗ್ರಿಗಳ ಅಂಗಡಿ ಶುಭಾರಂಭ

0

ಅಳದಂಗಡಿ: ಅಳದಂಗಡಿಯಲ್ಲಿ ಶ್ರೀ ಭಗವಾನ್ ಸಾಯಿಬಾಬಾ ಮೆಟಲ್ಸ್ ಮತ್ತು ಪೂಜಾ ಸಾಮಗ್ರಿಗಳ ಅಂಗಡಿಯ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾll ಪದ್ಮಪ್ರಸಾದ್ ಅಜಿಲರು ನೆರವೇರಿಸಿ ಶುಭಕೋರಿದರು.

ಕಾರ್ಯಕ್ರಮದಲ್ಲಿ ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯ ಹರಿಪ್ರಸಾದ್, ವಿಭಾಗ ಸಹ ಸಂಚಾಲಕರು ಬಜರಂಗದಳ ಮಂಗಳೂರು ಪುನೀತ್ ಅತ್ತಾವರ, ಆಟೋ ಚಾಲಕರು ಮಾಲಕರ ಸಂಘದ ಅಧ್ಯಕ್ಷ ಹರಿಶ್ಚಂದ್ರ, ಅಳದಂಗಡಿ ಶ್ರೀದೇವಿ ಕಾಂಪ್ಲೆಕ್ಸ್ ನ ಮಾಲಕ ಎನ್.ಎ ಗೋಪಾಲ್, ಯುವ ಬಿಲ್ಲವ ವೇದಿಕೆ ಶಿರ್ಲಾಲು ಇದರ ಅಧ್ಯಕ್ಷ ಹರೀಶ್ ಕಲ್ಲಾಜೆ, ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಇದರ ಅಧ್ಯಕ್ಷ ದೇವದಾಸ್ ಸಾಲಿಯಾನ್, ತಾಲೂಕು ಸಂಚಾಲಕರು ಹಿಂದೂ ಜಾಗರಣ ವೇದಿಕೆ ಗುರುಪ್ರಸಾದ್ ನಾರಾವಿ ಉಪಸ್ಥಿತರಿದ್ದರು.

ಅಂಗಡಿಯಲ್ಲಿ ಎಲ್ಲಾ ತರಹದ ಪೂಜಾ ಸಾಮಗ್ರಿಗಳು ದೈವದೇವರ ಮುಖ ಮೂರ್ತಿಗಳು ಅತಿ ಕಡಿಮೆ ದರಯದಲ್ಲಿ ದೊರೆಯುತ್ತದೆ ಎಂದು ಮಾಲಕ ದೀಪಕ್ ಜಿ ತಿಳಿಸಿದರು.

ವಿಶೇಷವಾಗಿ ಈ ಶುಭಾರಂಭಕ್ಕೆ ಆಗಮಿಸಿದಂತಹ ಎಲ್ಲಾ ಮುಖ್ಯ ಅತಿಥಿಗಳಿಗೆ, ಬಂಧು ಮಿತ್ರರಿಗೆ, ಊರಿನವರಿಗೆ ಸಸಿ ನೀಡುವ ಮೂಲಕ ಎಲ್ಲರಿಗೂ ಪರಿಸರ ಜಾಗೃತಿ ಮೂಡಿಸಲಾಯಿತು.

ಶ್ರೀ ಭಗವಾನ್ ಸಾಯಿಬಾಬಾ ಮೆಟಲ್ಸ್ ಮತ್ತು ಪೂಜಾ ಸಾಮಾಗ್ರಿಗಳ ಅಂಗಡಿಯ ಮಾಲಕರಾದ ದೀಪಕ್ ಜಿ ಬೆಳ್ತಂಗಡಿ ಸ್ವಾಗತಿಸಿ, ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here