ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕ ಸಂಘದಿಂದ ಕ್ಷೇಮನಿಧಿ ಯೋಜನೆಯ ಪ್ರಥಮ ಸಹಾಯಧನ ವಿತರಣೆ

0

ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ರಿಕ್ಷಾ ಚಾಲಕರ ಸಂಕಷ್ಟಕ್ಕೆ ನೆರವಾಗುವ ಕ್ಷೇಮನಿಧಿ ಯೋಜನೆಯ ಪ್ರಥಮ ಸಹಾಯಧನ ವಿತರಿಸಲಾಯಿತು.

ನಾರಾವಿಯ ರಿಕ್ಷಾ ಚಾಲಕ ಸಂಘದ ಮಾಜಿ ಅಧ್ಯಕ್ಷ ಅಣ್ಣಾಜಿ ಪೂಜಾರಿ ಅವರ ಅಸ್ಪತ್ರೆ ಚಿಕಿತ್ಸೆಗೆ ನೆರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಬಿಎಂಎಸ್ ರಿಕ್ಷಾ ಚಾಲಕ ಸಂಘದ ಗೌರವ ಸಲಹೆಗಾರರಾದ ಉಮೇಶ್ ಪೂಜಾರಿ ಅತ್ತಾಜೆ, ಬಿಎಂಎಸ್ ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಬಿಎಂಎಸ್ ಬೆಳ್ತಂಗಡಿ ತಾಲೂಕು ಸಂಯೋಜಕರಾದ ಸಾಂತಪ್ಪ ಕಲ್ಮಂಜ, ಕುಮಾರ್ ನಾಥ್ ಕಲ್ಮಂಜ, ರಮೇಶ್ ಬೊಳ್ಳಿ ಉಜಿರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here