ಸುದ್ದಿ ವರದಿಯಿಂದ ಗಣೇಶ್ ಅವರಿಗೆ ಕೃತಕ ಕಾಲು- ಇದು ಸುದ್ದಿಯ ಫಲಶೃತಿ

0

ತೋಟತ್ತಾಡಿ: ಕಳೆದ ವಾರ ತೋಟತ್ತಾಡಿ ಗ್ರಾಮದ ಕೃಷಿಕ ಗಣೇಶ್ ತಮ್ಮ ಅಂಗವೈಕಲ್ಯತೆ ಇದ್ದರೂ ಕೃಷಿ ಮೂಲಕ ಸಾಧನೆ ಮಾಡಿ ಬದುಕು ಕಟ್ಟಿಕೊಂಡ ವರದಿಯನ್ನು ಸುದ್ದಿ ಚಾನಲ್ ನಲ್ಲಿ ಬಿತ್ತರಿಸಿತ್ತು.

ಅವರ ಬಹುಮುಖ್ಯ ಬೇಡಿಕೆಯಾಗಿದ್ದ ಕೃತಕ‌‌ ಕಾಲನ್ನು ಸುದ್ದಿ ವರದಿ ಬಳಿಕ ನೀಡಲಾಗಿದೆ.

ಸುದ್ದಿಯಲ್ಲಿ ವರದಿ ಬಂದ ಬಳಿಕ‌ ತೋಟತ್ತಾಡಿಯ ಸನತ್ ಮೂರ್ಜೆಯವರು ಗಣೇಶ್ ಅವರ ಪರಿಸ್ಥಿತಿಯನ್ನು ಮಾಜಿ ಶಾಸಕ ವಸಂತ ಬಂಗೇರ ಅವರಿಗೆ ತಿಳಿಸಿದ್ದು ತಕ್ಷಣ ಸ್ವಂದಿಸಿದ ಕಾರಣ ಜೂ.28 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯರು ಕೃತಕ ಕಾಲನ್ನು ನೀಡಲಾಗಿದೆ.

ಇದು ಸುದ್ದಿಯ ಬಹುದೊಡ್ಡ ಫಲಶೃತಿ.

LEAVE A REPLY

Please enter your comment!
Please enter your name here