ಬಳಂಜ: ರಾಜ್ಯ ಮಡಿವಾಳರ ಸಂಘದ ವತಿಯಿಂದ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ

0

ಬಳಂಜ: ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ಸಹಾಯದೊಂದಿಗೆ ಬೆಳ್ತಂಗಡಿ ತಾಲೂಕು ಮಡಿವಾಳರ ಒಕ್ಕೂಟ ಹಾಗೂ ವೇಣೂರು ಮಡಿವಾಳ ಸಮಾಜ ಸೇವಾ ಸಂಘ ರಿಜಿಸ್ಟರ್ ಇದರ ಸಹಕಾರದೊಂದಿಗೆ 2023 ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾದ ಮಡಿವಾಳ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬಳಂಜ ಬದಿನಡೆ ಕ್ಷೇತ್ರದಲ್ಲಿ ಜೂ.25 ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾಗಿ ಅಶೋಕ್ ಪಾನೂರು ಡಾ.ಸಂಜೀವ ಮಡಿವಾಳ ಅಧ್ಯಕ್ಷರು ಕರ್ನಾಟಕ ರಾಜ್ಯ ಮಡಿವಾಳ ಸಂಘಟನೆಗಳ ಒಕ್ಕೂಟ ಬೆಂಗಳೂರು ಹಾಗೂ ಜಯ ಸಾಲಿಯನ್ ಧರ್ಮದರ್ಶಿಗಳು ಶ್ರೀ ನಾಗಬ್ರಹ್ಮ ಲಿಂಗೇಶ್ವರ ದೇವಸ್ಥಾನ ಬದಿ ನಡೆ ಬಳಂಜ, ರಂಜಿತ್ ಪಾರಿಜಾತ ಸದಸ್ಯರು ಗ್ರಾಮ ಪಂಚಾಯತ್ ವೇಣೂರು, ವಿಟ್ಟಲ್ ಕೆ ಅಳದಂಗಡಿ, ಜಾನಕಿ ಕುಂದಾರ್ ನಿವೃತ್ತ ಮುಖ್ಯೋಪಾಧ್ಯಾಯನಿ ಮೂಡುಕೋಡಿ, ಸತೀಶ್ ವೇಣೂರು ಪ್ರಧಾನ ಕಾರ್ಯದರ್ಶಿ ಮಡಿವಾಳ ಸಮಾಜ ಸೇವಾ ಸಂಘ ವೇಣೂರು, ಶ್ರೀ ಗಣೇಶ್ ಸಾಲಿಯನ್ ಅಧ್ಯಕ್ಷರು ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ಬೆಳ್ತಂಗಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here