ಬಂದಾರು ಸರಕಾರಿ ಶಾಲೆಯಲ್ಲಿ ಪೋಷಕರಿಂದ ಶ್ರಮದಾನ

0

ಬಂದಾರು: ಕ್ರೀಡಾ ಸಾಧನೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಬಂದಾರು ಸರಕಾರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಳೆಗಾಲದ ಹಿನ್ನೆಲೆಯಲ್ಲಿ ಶಾಲೆಯ ವಿವಿಧ ಅಗತ್ಯ ಕೆಲಸಗಳನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪೋಷಕರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸದಸ್ಯರು ಜೂ.26 ರಂದು ಶ್ರಮದಾನದ ಮೂಲಕ ನಡೆಸಿಕೊಟ್ಟರು.
ಶ್ರಮದಾನದಲ್ಲಿ ಶಾಲಾ ಆವರಣದ ಬೇಲಿ ದುರಸ್ತಿ, ಆಟದ ಮೈದಾನದ ಸುತ್ತಲಿನ ಚರಂಡಿ ನಿರ್ವಹಣೆ, ಶಾಲೆಯ ಅಡಿಕೆ ಗಿಡದ ತೋಟಕ್ಕೆ ಸೊಪ್ಪು ಹಾಕುವುದು ಮತ್ತಿತರ ಕೆಲಸಗಳನ್ನು ಮಾಡಲಾಯಿತು.
ಈ ಸಂದರ್ಭ ಶಾಲಾ ಶ್ರಮದಾನದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಉಮೇಶ್ ಗೌಡ ಪೊಯ್ಯೋಲೆ ಅವರು ಮಾತನಾಡಿ ಎಲ್ಲಾ ಪೋಷಕರು ಉತ್ಸಾಹದಿಂದ ಕೆಲಸದಲ್ಲಿ ಪಾಲ್ಗೊಂಡು ಶ್ರಮದಾನವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿಕೊಂಡು ಕೃತಜ್ಞತೆ ಸಲ್ಲಿಸಿದರು.

ಶ್ರಮದಾನದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಮಂಜನಾಯ್ಕ ಸಿ. ಮತ್ತು ಶಿಕ್ಷಕ ವೃಂದ ಭಾಗಿಯಾದರು.

LEAVE A REPLY

Please enter your comment!
Please enter your name here