ಕಣಿಯೂರು ಗ್ರಾ.ಪಂ. ನಲ್ಲಿ ರಜಾದಿನದಂದು ಕೊಕ್ಕಡ ಕೃಷಿ ಅಧಿಕಾರಿಗಳಿಂದ ಇ-ಕೆವೈಸಿ ಮಾಡಿಸುವ ಕಾರ್ಯಕ್ರಮ

0

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕಣಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇ-ಕೆವೈಸಿ ಮಾಡಿಸಲು ಬಾಕಿ ಇರುವ ರೈತರ ಇ-ಕೆವೈಸಿ ಮಾಡಿಸುವ ಕಾರ್ಯಕ್ರಮ ನಾಲ್ಕನೇ ಶನಿವಾರದ ರಜಾದಿನದಂದು ಕಣಿಯೂರು ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಕೊಕ್ಕಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಚಿದಾನಂದ.ಎಸ್.ಹೂಗಾರ್ ಹಾಗೂ ಸಿಬ್ಬಂದಿಗಳಾದ ತ್ರಿವೇಣಿ, ಚಂದ್ರಕಲಾ, ಗುಲಾಬಿ, ಕೃಷಿ ಸಖೀ ಶ್ರಾವ್ಯ ಹಾಜರಿದ್ದರು.

ಕಣಿಯೂರು ಗ್ರಾಮ ಪಂಚಾಯತಿಯಲ್ಲಿ ಸುಮಾರು 315 ಕೃಷಿಕರು ಇ-ಕೆವೈಸಿ ಮಾಡಿಸಲು ಬಾಕಿ ಇದ್ದು ಹೆಚ್ಚಿನ ಕೃಷಿಕರು ಇದರ ಪ್ರಯೋಜನ ಪಡೆದುಕೊಂಡ್ಡಿದ್ದು ರಜಾದಿನದಂದು ಸಹಾ ಕೃಷಿಕರ ಅನುಕೂಲಕ್ಕಾಗಿ ನಮ್ಮೂರಿಗೆ ಬಂದು ಸೇವೆ ನೀಡಿದ ಕೃಷಿ ಅಧಿಕಾರಿಗಳನ್ನು ಮನಸಾರೆ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here