ನಾಳ: ತೇರಾ ಬಾಕಿಮಾರು ಗದ್ದೆಯಲ್ಲಿ ನೇಜಿ ನಾಟಿ

0

ನಾಳ: ನ್ಯಾಯತರ್ಪು ಗ್ರಾಮದ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ನೇಜಿ ನಾಟಿ ಕಾರ್ಯಕ್ರಮ ಜೂ.24ರಂದು ಜರುಗಿತು.


ಸುಮಾರು ಅಂದಾಜು 900 ವರ್ಷಗಳ ಇತಿಹಾಸ ಪ್ರಸಿದ್ಧ ದೇವಸ್ಥಾನವು ನ್ಯಾಯತರ್ಪು, ಕಳಿಯ ಹಾಗೂ ಓಡಿಲ್ನಾಳ ಗ್ರಾಮದ ಭಕ್ತಾದಿಗಳು ಆರಾಧನೆ ಮೂಲಕ ವಿವಿಧ ಕಾರ್ಯಕ್ರಮಗಳು ನಡೆಯುತ್ತ ಬರುತ್ತದೆ.
ಭತ್ತದ ಬೇಸಾಯ ಮರೆಮಾಚುತ್ತಿದ್ದು ಭಾದ್ರಪದ ಮಾಸದಲ್ಲಿ ದೇವಸ್ಥಾನಗಳಲ್ಲಿ ತನೆ ಕಟ್ಟುವುದು ಹಾಗೂ ಹೊಸ ಆಕ್ಕಿ ಊಟ ಆಚರಣೆ ನಡೆಯುತ್ತದೆ.ಈ ಸಂದರ್ಭದಲ್ಲಿ ತೆನೆ ಅಗತ್ಯವಾಗಿದೆ.ಮುಂದಿನ ದಿನಗಳಲ್ಲಿ ಭತ್ತದ ಬೇಸಾಯ ಕೃಷಿ ಬೆಳೆಸುವುದು ಅನಿವಾರ್ಯವಾಗಿದೆ ಎಂದು ಹಿರಿಯರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.


ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ವಸಂತ ಮಜಲು ನೇಜಿ ನಾಟಿಗೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ನಾಳ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರಾದ ಅಂಬಾ ಬಿ.ಆಳ್ವ ನಾಳ, ದಿನೇಶ್ ಗೌಡ ಕಲಾಯಿತೊಟ್ಟು, ಉಮೇಶ್ ಕೇಲ್ದಡ್ಕ, ರಾಜೇಶ್ ಶೆಟ್ಟಿ ಅಡ್ಡಕೊಡಂಗೆ, ನಾಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಕಳಿಯ ಗ್ರಾಮ ಪಂಚಾಯತು ಸದಸ್ಯ ಸುಧಾಕರ ಮಜಲು, ನಾಳ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ನಾಳ ದೇವಸ್ಥಾನದ ಪ್ರಬಂಧಕರಾದ ಗಿರೀಶ್ ಶೆಟ್ಟಿ ಗೇರುಕಟ್ಟೆ, ನಾಳ ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೋಳ್ಯ, ಮಾತೃ ಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ್, ನ್ಯಾಯತರ್ಪು ಯೋಜನೆ ಒಕ್ಕೂಟದ ಸೇವಾ ಪ್ರತಿನಿಧಿ ವಿನೋದ, ಹಿರಿಯ ಕೃಷಿಕರಾದ ಪೂವಪ್ಪ ಶೆಟ್ಟಿ ನಾಳ, ಹೀರ್ಯ ಸದಾಶಿವ ನೈಾಕ್, ರೈಲ್ವೆ ಅಂಚೆ ಇಲಾಖೆ ನಿವೃತ್ತ ವಿಠ್ಠಲ ಶೆಟ್ಟಿ, ಯೋಗೀಶ್ ಅಡ್ಡಕೊಡಂಗೆ, ಆಶಾ ಕಾರ್ಯಕರ್ತೆ ಶಶಿಕಲಾ, ವಸಂತ ಗೌಡ ಕಲಾಯಿತೊಟ್ಟು, ದಿನಕರ ಬಂಗೇರ ಖಂಡಿಗ, ರಾಘವ ಹೆಚ್, ಅಣ್ಣಿ ಗೌಡ ಬದ್ಯಾರು, ಜಯಚಂದ್ರ ಆಚಾರ್ಯ, ಸೋಮಪ್ಪ ಗೌಡ ಕುಬಾಯ, ನವೀನ್ ಪೂಜಾರಿ ಕಜೆ, ವಿಜಯ ನಾಳ, ನಿವೃತ್ತ ಆರೋಗ್ಯ ಸಹಾಯಕಿ ಮಹಾಲಕ್ಷ್ಮಿ ನಾಳ, ಶೋಭ ನಾಳ, ಮಾಲತಿ ನಾಳ, ಲೀಲಾವತಿ ಕಲಾಯಿತೊಟ್ಟು, ಕಮಲ ಬಿಳಿಬೈಲು, ಲೀಲಾ ಮುದ್ದುಂಜ ಹಾಗೂ ಅರ್ಚಕರು, ಸಹಾಯಕರು, ಭಕ್ತಾದಿಗಳು ಬಾಗವಹಿಸಿದರು.

” ಕುಲ್ಲುಂಜ ಕೃಷಿಕ ಉಮನಾಥ ಶೆಟ್ಟಿ ಭತ್ತದ ಬೀಜ ಬಿತ್ತನೆ ಮಾಡಿ ನೇಜಿ ತಯಾರಿಸಿ ದೇವಸ್ಥಾನಕ್ಕೆ ಉಚಿತವಾಗಿ ನೀಡಿದರು.”

LEAVE A REPLY

Please enter your comment!
Please enter your name here