ಶಿಶಿಲ ಜಿನ ಮಂದಿರದಲ್ಲಿ ಪಂಚಕಲ್ಯಾಣ ಮತ್ತು ಬಿಂಬ ತರುವಲ್ಲಿ ಸಹಕರಿಸಿದವರಿಗೆ ಅಭಿನಂದನೆ

0

ಶಿಶಿಲ: ಜೂ.11ರಂದು ಕ್ಷೇತ್ರ ಚಂದ್ರಪುರ ಶಿಶಿಲದ ಜಿನ ಮಂದಿರದಲ್ಲಿ ಪಂಚಕಲ್ಯಾಣದಿಂದ ಸಂಪನ್ನಗೊಂಡ ಶ್ರೀ ಸಿದ್ದ ಭಗವಂತರು ವಿರಾಜಮಾನರಾದರ ಈ ಸಂದರ್ಭದಲ್ಲಿ ಬಿಂಬವನ್ನು ತರುವಲ್ಲಿ ಸಹಕರಿಸಿದ ಶ್ರೀ ಅಜಿತ್ ರವರನ್ನು ಆಡಳಿತ ಮಂಡಳಿ ಹಾಗೂ ದಾನಿಗಳಾದ ಉಜಿರೆಯ ಶ್ರೀ ಎಸ್ ಡಿ ಶೆಟ್ಟಿ ದಂಪತಿಗಳು ಗೌರವಿಸಿದರು.

ಪಡಂಗಡಿ ಶ್ರೀ ಜಿನೇಂದ್ರ ಭಂಗ, ಉಜಿರೆಯ ನಾಗರಾಜ ಪೂವಣಿಯವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಧನಕೀರ್ತಿ ಶೆಟ್ಟಿ ಧರ್ಮಸ್ಥಳ, ಯಶೋಧರ ಶೆಟ್ಟಿ ಸಮೃಧಿ,ರವಿರಾಜ ಶೆಟ್ಟಿ ಕುಂಡೊವು, ಆಡಳಿತ ಮಂಡಳಿ ಅಧ್ಯಕ್ಷ ವಿಜಯಕುಮಾರ್, ಕಾರ್ಯಾಧ್ಯಕ್ಷ ಚಿತ್ತರಂಜನ್, ಉಪಾಧ್ಯಕ್ಷ ಜಿನರಾಜ ಪೂವಣಿ, ಕೋಶಾಧಿಕಾರಿ ಪಣಿರಾಜ್ ಜೈನ್, ವೀರೇಂದ್ರ ಕುಮಾರ್ ವಳಂಬಲ, ಸಂತೋಷ್ ಕುಮಾರ್ ವಳಂಬಲ, ಉಜಿರೆಯ ನಾಭಿರಾಜ ಪೂವಣಿ, ರಾಣಿ ಶಿಶುಗಲಿ ಜೈನ ಮಹಿಳಾ ಸಮಾಜದ ಅಧ್ಯಕ್ಷ ನಾಗಕನ್ನಿಕ, ಶಶಿಪ್ರಭ, ಸುಗುಣ ಶೆಟ್ಟಿ,ಶಕುಂತಲಾ ಜೈನ್,ಸುರಭಿ, ಜಯಶ್ರೀ, ಸರೋಜಾ ಮೊದಲಾದವರು ಉಪಸ್ಥಿತರಿದ್ದರು.

ಭೋಜನದ ವ್ಯವಸ್ಥೆಯನ್ನು ಸುರಭಿ ಜಯಕುಮಾರ್ ಕಲ್ಲುಗುಡ್ಡೆ ಮಾಡಿದರು.ಕಾರ್ಯಕ್ರಮವನ್ನು ಡಾ.ಜಯಕೀರ್ತಿ ಜೈನ್ ನಿರ್ವಹಣೆ ಮಾಡಿದರು

LEAVE A REPLY

Please enter your comment!
Please enter your name here