ಉಜಿರೆ: ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಿಂದ ಪರಿಸರ ದಿನಾಚರಣೆ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರಿಂದ ದತ್ತು ಶಾಲೆಯಾದ ಸ.ಹಿ.ಪ್ರಾ.ಶಾಲೆ ಮುಂಡತ್ತೊಡಿ ಪೆರ್ಲ, ಇಲ್ಲಿ ಜೂ.5ರಂದು ಗಿಡಗಳನ್ನು ನೆಟ್ಟು ಪರಿಸರ ದಿನವನ್ನು ಆಚರಿಸಲಾಯಿತು.


ಕಾರ್ಯಕ್ರಮವನ್ನು ಕುರಿತು ಔಪಚಾರಿಕವಾಗಿ ಮಾತನಾಡಿದ ಸ್ವಯಂಸೇವಕ ಯಕ್ಷಿತ್ “ಕೃಷಿತೋ ನಾಸ್ತಿ ದುರ್ಭಿಕ್ಷಂ” ಎಂಬ ಮಾತಿನಂತೆ, ಕೃಷಿಯನ್ನು ನಂಬಿದವರು ಎಂದು ಹಾಳಾಗುವುದಿಲ್ಲ. ನಮ್ಮ ಪೂರ್ವಜರು ಪರಿಸರವನ್ನು ದೇವರಂತೆ ಕಾಣುತ್ತಿದ್ದರು. ಯಾವುದೇ ಗಿಡಗಳನ್ನು ನೆಟ್ಟರು ಅದನ್ನು ಮಕ್ಕಳಂತೆ ಪೋಷಿಸುತ್ತಿದ್ದರು. ಆಧುನಿಕರಣದ ಈ ಜಗತ್ತಿನಲ್ಲಿ ಈಗಲೂ ಪರಿಸರ ಪ್ರೇಮಿಗಳು ಇದ್ದಾರೆ ಎಂಬುದು ಸಂತಸದ ವಿಷಯ. ಮುಂದಿನ ಪೀಳಿಗೆಗಾಗಿ ಈಗಲೇ ನಮ್ಮ ಪರಿಸರವನ್ನು ಉಳಿಸಬೇಕು. ಗಿಡಮರಗಳನ್ನು ನೆಡುವುದು ಕೇವಲ ಪರಿಸರ ದಿನ, ವನಮಹೋತ್ಸವಕ್ಕೆ ಮಾತ್ರ ಸೀಮಿತವಾಗಬಾರದು. ನಿಜವಾದ ಸ್ವಯಂಸೇವಕರಿಗೆ ಪ್ರತಿದಿನವೂ ಪರಿಸರ ದಿನವಾಗಿರುತ್ತದೆ” ಎಂದರು.


ಈ ಕಾರ್ಯಕ್ರಮಕ್ಕೆ ಮುಂಡತ್ತೋಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ. ರಮೇಶ್ ಅವರು ಚಾಲನೆ ನೀಡಿದರು. ರಾ.ಸೇ.ಯೋಜನಾ ಘಟಕದ ಸ್ವಯಂಸೇವಕರು, ಯೋಜನಾಧಿಕಾರಿಗಳು, ಶಾಲಾ ಶಿಕ್ಷಕರು ಹಾಗೂ ಮಕ್ಕಳು ಗಿಡಗಳನ್ನು ನೆಟ್ಟರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಪ್ರೊ. ದೀಪ ಆರ್.ಪಿ, ಹಿಂದಿ ವಿಭಾಗದ ಅಧ್ಯಾಪಕರಾದ ಶ್ರೀಮತಿ ಶೃತಿ ಹಾಗೂ 20 ಸ್ವಯಂಸೇವಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here