ಮುಂಡಾಜೆ ಬಂಟರ ಗ್ರಾಮ ಸಮಿತಿ ಮಾಸಿಕ ಸಭೆ: ಎಸ್.ಎಸ್.ಎಲ್.ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

0

ಮುಂಡಾಜೆ: ಮುಂಡಾಜೆ ಬಂಟರ ಗ್ರಾಮ ಸಮಿತಿಯ ಮಾಸಿಕ ಸಭೆಯು ಜೂ.4ರಂದು ಭವಾನಿ ಶೆಟ್ಟಿ ಸೋಮಂತಡ್ಕ ಇವರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮೀಣ ಸ್ವಉದ್ಯೋಗ ಮಾದರಿ ಮಹಿಳೆಯಾಗಿ ಗುರುತಿಸಲ್ಪಟ್ಟು ಭವಾನಿ ಶೆಟ್ಟಿ ಹಾಗೂ ಎಸ್ ಎಸ್ ಎಲ್ ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ದಿವ್ಯಶ್ರೀ ಶೆಟ್ಟಿ, ವಿಶಾಕ್ ಶೆಟ್ಟಿ ಮತ್ತು ಯಶಸ್ವಿ ಶೆಟ್ಟಿ ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರುಷೋತ್ತಮ ಶೆಟ್ಟಿ ಅಗರಿ ಇವರು ವಹಿಸಿದ್ದರು.ವೇದಿಕೆಯಲ್ಲಿ ಸಮಿತಿಯ ಹಿರಿಯರಾದ ರಾಮಣ್ಣ ಶೆಟ್ಟಿ ಅಗರಿ, ವಿಶ್ವನಾಥ ಶೆಟ್ಟಿ, ಮುಂಡ್ರುಪಾಡಿ, ಗಣೇಶ ಶೆಟ್ಟಿ ಸೋಮಂತಡ್ಕ , ಇವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ವಿಜಯಕುಮಾರ್ ರೈ ಸ್ವಾಗತಿಸಿ ನಿರೂಪಿಸಿದರು.ಬಾಲಕೃಷ್ಣ ಶೆಟ್ಟಿ ಹೊಸ ಗದ್ದೆ, ಧನ್ಯವಾದಿಸಿದರು. ಮಾಸ್ಟರ್ ಪಂಚಮ್ ಶೆಟ್ಟಿ ಮತ್ತು ಸಾತ್ವಿಕ್ ರೈ ಪ್ರಾರ್ಥಿಸಿದರು.ಸಮಿತಿಯ ಎಲ್ಲ ಬಂಟ ಬಂಧುಗಳು ಸಹಕರಿಸಿದರು.

LEAVE A REPLY

Please enter your comment!
Please enter your name here