ಪದ್ಮುಂಜದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನಾ ಸಭೆ

0

ಪದ್ಮುಂಜ: ಪದ್ಮುಂಜ ಇಲ್ಲಿಯ ಕಣಿಯೂರು ಗ್ರಾಮದ ಬೊಳ್ಳರಮಜಲು ಎಂಬಲ್ಲಿ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ರವರ ಪರ ಪ್ರಚಾರಕ್ಕಾಗಿ ದುಡಿದ ಪಕ್ಷದ ಸಕ್ರೀಯ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಜೂನ್ 3ರಂದು ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಿತ್ ಶಿವರಾಂ ರವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ನೀವು ನನ್ನ ಹಾಗೂ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಶಕ್ತಿ ಮೀರಿ ದುಡಿದಿದ್ದೀರಿ ಆದರೆ ಬಿಜೆಪಿ ಯವರು ಚುನಾವಣೆಯ ಮುನ್ನಾದಿನ ರಾತೋರಾತ್ರಿ ಅಕ್ರಮವಾಗಿ ಹಣ ಮತ್ತು ಹೆಂಡದ ಆಮಿಷವೊಡ್ಡಿ ಹಂಚಿಕೆ ಮಾಡಿದ ಕಾರಣ ನನ್ನ ಸೋಲಿಗೆ ಕಾರಣವಾಯಿತು.ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯನ್ನು ಮಾಡಬೇಕಾದೆ.ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಳುಪಿಸುವುದರ ಮೂಲಕ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಶಕ್ತಿ ಗೊಳಿಸಲು ಇದೀಗ ಸುಸಂದರ್ಭ ಎಂದರು.ಕಾಂಗ್ರೆಸ್ ನಾಯಕರಾದ ಜಯವಿಕ್ರಂ, ಶುಬಾಶ್ ರೈ, ಈಶ್ವರ ಭಟ್ ಮಾಯಿಲ್ತೋಡಿ, ಹರೀಶ್ ಗೌಡ, ಆದರ್ಶ್ ಶೆಟ್ಟಿ, ಮನೋಹರ ಪೂಜಾರಿ, ಅಬ್ಬಾಸ್ ಬಟ್ಲಡ್ಕ, ಪಂ.ಸದಸ್ಯೆ ಸುಮತಿ ಶೆಟ್ಟಿ, ಶೇಕರ ಶೆಟ್ಟಿ, ಉಮಾವತಿ, ರಮಾನಂದ ಪೂಜಾರಿ, ವಿಠಲ ಭಟ್, ಸಶಿಕಲಾ ಶೆಟ್ಟಿ, ಆಶಿಫ್ ಕಣಿಯೂರು, ಬಾಬು ಕಣಿಯೂರು, ಸೇರಿದಂತೆ ಪಕ್ಷದ ನಾಯಕರು ಕಾರ್ಯಕರ್ತರು ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.

ಕಾಂಗ್ರೇಸ್ ಬೂತ್ ಅಧ್ಯಕ್ಷ ಕಾಸಿಂ ಪದ್ಮುಂಜ ರವರು ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here