ಸುಳ್ಯ ದಂಪತಿಗೆ ಮಕ್ಕಳ ಭಾಗ್ಯ ಕರುಣಿಸಿಕೊಟ್ಟ ಬೆಳಾಲು ಶ್ರೀ ಆರಿಕೋಡಿ ಚಾಮುಂಡೇಶ್ವರಿ

0

ಬೆಳ್ತಂಗಡಿ: ಮಕ್ಕಳಾಗಿಲ್ಲ ಎಂದು ಹರೆಕೆ ಹೊತ್ತ ಸುಳ್ಯದ ಮೂಲದ ದಂಪತಿಯ ಕಷ್ಟವನ್ನು ಶ್ರೀ ಆರಿಕೋಡಿ ಚಾಮುಂಡೇಶ್ವರಿ ಕೇವಲ ಒಂದು ವರ್ಷದಲ್ಲೇ ಬಗೆಹರಿಸಿಕೊಟ್ಟಿದ್ದಾಳೆ.

ಇದರೊಂದಿಗೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಬರೆದಡಿ ಮನೆಯ ಗಿರಿ ಪ್ರಸಾದ್ ಮತ್ತು ರಮ್ಯ ದಂಪತಿಯ ಬಾಳಿನಲ್ಲಿ ಹೊಸ ಬೆಳಕು ಮೂಡಿಸಿದ್ದಾಳೆ.ಗಿರಿ ಪ್ರಸಾದ್ ಮತ್ತು ರಮ್ಯ ದಂಪತಿ ಹಲವು ವರ್ಷಗಳ ಹಿಂದೆಯೇ ಮದುವೆಯಾಗಿದ್ದರು. ಆದರೆ ಅವರ ಬಾಳಿನಲ್ಲಿ ಮಗುವಿನ ಭಾಗ್ಯ ಒದಗಿ ಬಂದಿರಲಿಲ್ಲ. ಹಲವಾರು ಮದ್ದು ಮಾಡಿದರು, ಹರಕೆ ಹೊತ್ತರು , ಏನೇ ಮಾಡಿದರೂ ಇವರ ಜೀವನದಲ್ಲಿ ಬೆಳಕು ಕಾಣಿಸಲೇ ಇಲ್ಲ.

ಇಂತಹ ಸಂದರ್ಭದಲ್ಲಿ ಅವರು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಬಂದು ದೇವಿ ಚಾಮುಂಡೇಶ್ವರಿಯ ಅಭಯದ ನುಡಿಯಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಇಂತಹ ಉದಾಹರಣೆಗಳು ಈ ಕ್ಷೇತ್ರದಲ್ಲಿ ಅನೇಕ ಇದೆ ಈ ಪುಣ್ಯಕ್ಷೇತ್ರಕ್ಕೆ ದಿನದಿಂದ ದಿನಕ್ಕೆ ಭಕ್ತರ ದಂಡು ಹೆಚ್ಚಾಗಿ ಬರುತ್ತಿದೆ.

LEAVE A REPLY

Please enter your comment!
Please enter your name here