ಸ್ವರ್ಣೋದ್ಯಮ ಮಳಿಗೆ ಮಾನಕ ಜ್ಯುವೆಲ್ಲರ್ಸ್ ನ ನೂತನ ಮಳಿಗೆ ನ್ಯೂ ಮಾನಕ ಜ್ಯುವೆಲ್ಲರ್ಸ್ ಉದ್ಘಾಟನೆ

0

ಪುತ್ತೂರು: 18 ವರ್ಷಗಳಿಗೂ ಹೆಚ್ಚು ಸಮಯದಿಂದ ಸ್ವರ್ಣಾಭರಣ ವ್ಯವಹಾರದಲ್ಲಿ ತೊಡಗಿಸಿಕೊಂಡು ಗ್ರಾಹಕರ ಪ್ರೀತಿ, ವಿಶ್ವಾಸಭರಿತ ಮಳಿಗೆಯಾಗಿ ಪುತ್ತೂರು ಸಹಿತ ಹತ್ತೂರಿನಲ್ಲಿ ಜನಪ್ರಿಯವಾಗಿರುವ ಮಾನಕ ಜ್ಯುವೆಲ್ಲರ್ಸ್ ನ ನೂತನ ಬೃಹತ್ ಜ್ಯುವೆಲ್ಲರಿ ಶೋರೂಮ್ ಮೇ.27ರಂದು ಪುತ್ತೂರು ಮುಖ್ಯರಸ್ತೆಯಲ್ಲಿ ಸಿಪಿಸಿ ಪ್ಲಾಝಾದ ಎದುರು ಉದ್ಘಾಟನೆಗೊಂಡಿತು.

ಯಂ.ಸಂಜೀವ ಶೆಟ್ಟಿ ಜವುಳಿ ಮಳಿಗೆಯ ಗಿರಿಧರ್ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿದರು.ಅವರ ಸಹೋದರ ಶಿವಶಂಕರ್, ಮಾಜಿ ಪುರಸಭೆ ಅಧ್ಯಕ್ಷರಾದ ರಾಜೇಶ್ ಬನ್ನೂರು, ಗಣೇಶ್ ರಾವ್, ಧೈರ್ಯವರ್ಧನ್ ಕದಮ್, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಉಲಾಸ್ ಪೈ, ಗಿರಿಧರ್ ಅವರ ಪತ್ನಿ ವಿದ್ಯಾ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಜಾಕ್, ಸಂಸ್ಥೆಯ ಮಾಲಕರ ತಾಯಿ ಮಾನಕ ಕಂದಾರೆ ಸಹಿತ ಹಲವಾರು ಮಂದಿ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅರುಣ್ ಕುಮಾರ್ ಪುತ್ತಿಲ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ಸರ್ಪುದ್ದೀನ್ ತಂಙಳ್, ಅನ್ಸರ್ ಮುಸ್ಲಿಯಾರ್, ಇಬ್ರಾಹಿಂ ಸಾಗರ್, ಹಮೀದ್ ಸಾಲ್ಮರ, ಅಶ್ರಫ್ ಕಲ್ಲೇಗ ಸಹಿತ ಅನೇಕ ಗಣ್ಯರು ಆಗಮಿಸಿ ಶುಭಹಾರೈಸಿದರು. ಸಿದ್ದೀಕ್ ಬೀಟಿಗೆ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಮಾಲಕ ಸಹೋದರರಾದ ಸಿದ್ದನಾಥ್ ಕಂದಾರೆ, ಪತ್ನಿ ಪದ್ಮಿನಿ, ಸಹದೇವ್ ಕಂದಾರೆ, ಪತ್ನಿ ಅಪರ್ಣ, ಸನದ್ ಕುಮಾರ್, ಪತ್ನಿ ಮಧುರ ಮತ್ತು ಮಕ್ಕಳಾದ ಶ್ರೀವರ್ಧನ್, ಶೌರ್ಯವರ್ಧನ್, ಮನಸ್ವಿ, ಸಮರ್ಥ್ ಹಾಗು ಸಂಬಂಧಿಕರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಅರ್ಚಕ ಜಗದೀಶ್ ಭಟ್ ವೈದಿಕ ಕಾರ್ಯಕ್ರಮ ನೆರವೇರಿಸಿದರು.


ಲಾಭದಲ್ಲಿ ಸಮಾಜಕ್ಕೆ ಕೊಡುವ ಶಕ್ತಿ ಪ್ರಾಪ್ತಿಯಾಗಲಿ: ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಅವರು ಮಾತನಾಡಿ ಪುತ್ತೂರಿನ ಹೊನ್ನ ಕಿರೀಟಕ್ಕೆ ಮುಕುಟಮಣಿಯಂತೆ ಕಂಗೊಳಿಸುತ್ತಿರುವ ಚಿನ್ನದ ಅಂಗಡಿಯು ಇನ್ನಷ್ಟು ಉತ್ತುಂಗಕ್ಕೆ ಏರಲಿ.ಮಾನಕ ಜ್ಯುವೆಲ್ಲರ್ಸ್ ನ ಮಾಲಕ ಸಹೋದರರ ತಂದೆ ಶಂಕರ್ ಕಂದಾರೆ ನಮಗೆ ಬಹಳ ಆತ್ಮೀಯರು.ಅವರು ಹಂತ ಹಂತವಾಗಿ ಬೆಳೆದು ಬರಬೇಕಾದರೆ ಅವರು ಜನರಿಗೆ ಕೊಡುವ ಸೇವೆ ಮುಖ್ಯವಾಗಿದೆ.ಇಲ್ಲಿ ವ್ಯಾಪಾರದ ಉದ್ದೇಶ ಲಾಭ.ಆದರೆ ಲಾಭದಲ್ಲಿ ಒಂದಷ್ಟು ಸಮಾಜಕ್ಕೆ ಕೊಡುವುದು ದೇವರು ಕೊಡುವ ಶಕ್ತಿ.ಅದನ್ನು ಮಹಾಲಿಂಗೇಶ್ವರ ದೇವರು ಪ್ರಾಪ್ತಿ ಮಾಡಲಿ ಎಂದರು.
ಗ್ರಾಹಕರ ಸಂತುಷ್ಟ ಪಡಿಸುವ ಸಂಸ್ಥೆಯಾಗಲಿದೆ: ಮಾನಕ ಜ್ಯುವೆಲ್ಲರ್ಸ್ ಸಂಸ್ಥೆಯ ಮಾಲಕರ ಸಂಬಂಧಿಕ ಧೈರ್ಯವರ್ಧನ್ ಕದಮ್ ಅವರು ಮಾತನಾಡಿ ಬಹಳ ವರ್ಷಗಳ ಹಿಂದೆ ಶಂಕರ್ ಶೇಟ್ ಅವರು ಪುತ್ತೂರಿಗೆ ಆಗಮಿಸಿ ಕಲಾಯಿ ಕೆಲಸದಿಂದ ಮುಂದೆ ಹೋಗಿ ಅವರ ಮಕ್ಕಳು ಇವತ್ತು ತಾಯಿಯ ಆಶೀರ್ವಾದದಿಂದ ೨ನೇ ಚಿನ್ನದ ಮಳಿಗೆಯ ಉದ್ಘಾಟನೆಯೂ ಆಗಿದೆ.ಮಾನಕ ಜ್ಯುವೆಲ್ಲರ್ಸ್ ಸಂಸ್ಥೆ ಕೇವಲ ಲಾಭದ ಒಂದೇ ದೃಷ್ಟಿಯಿಂದ ವ್ಯಾಪಾರ ಮಾಡದೆ ಗ್ರಾಹಕರಿಗೆ ಸಂತುಷ್ಟ ಪಡಿಸುವ ಸಂಸ್ಥೆಯಾಗಲಿದೆ ಎಂದರು.
ಇನ್ನಷ್ಟು ಶಾಖೆಗಳು ತೆರೆದುಕೊಳ್ಳಲಿ: ಮಳಿಗೆಯನ್ನು ಉದ್ಘಾಟಿಸಿದ ಯಂ.ಸಂಜೀವ ಶೆಟ್ಟಿ ಜವುಳಿ ಮಳಿಗೆಯ ಗಿರಿಧರ್ ಅವರ ಪತ್ನಿ ವಿದ್ಯಾ ಅವರು ಮಾತನಾಡಿ ಮಾನಕ ಜ್ಯುವೆಲ್ಲರ್ಸ್ ಸಂಸ್ಥೆಯ ಎರಡನೇ ಶಾಖೆಯನ್ನು ಸಂಜೀವ ಶೆಟ್ಟಿ ಸಂಸ್ಥೆಯ ಸಹೋದರರು ಉದ್ಘಾಟಿಸಿದ್ದಾರೆ.ಮುಂದೆ ಈ ಸಂಸ್ಥೆಯ ಇನ್ನಷ್ಟು ಶಾಖೆಗಳು ತೆರೆದುಕೊಳ್ಳಲಿ ಎಂದು ಹಾರೈಸಿದರು.
ಸಂಸ್ಥೆ ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಲಿ: ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಜಾಕ್ ಅವರು ಮಾತನಾಡಿ ಸಣ್ಣ ವ್ಯಾಪಾರದ ಮೂಲಕ ಎಲ್ಲಾ ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಇದೀಗ ನೂತನ ದೊಡ್ಡ ಶೋರೂಮ್ ಮೂಲಕ ಇನ್ನಷ್ಟು ಗ್ರಾಹಕರ ಪ್ರೀತಿಗೆ ಪಾತ್ರರಾಗಲಿ ಎಂದು ಹಾರೈಸಿದರು.ಸಂಸ್ಥೆಯಿಂದ ಅತಿಥಿಗಳಿಗೆ ಶಲ್ಯ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು.ಅನೇಕ ಗಣ್ಯರು ಆಗಮಿಸಿ ನೂತನ ಮಳಿಗೆಗೆ ಶುಭ ಹಾರೈಸಿದರು.

ಉದ್ಘಾಟನೆಯ ವಿಶೇಷ ಆಫರ್‌ಗಳು: ನೂತನ ಮಳಿಗೆಯ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗೆ ಚಿನ್ನದ ಮೇಲೆ ವಿಶೇಷ ಆಫರ್‌ಗಳನ್ನು ನೀಡಲಾಗಿದೆ.ಮೇ.27ರಿಂದ ಜೂ.31ರವರೆಗೆ ರೂ.10 ಸಾವಿರಕ್ಕೂ ಮಿಕ್ಕಿ ಖರೀದಿ ಮೇಲೆ ಕೂಪನ್ ಮೂಲಕ ಬಹುಮಾನ ಘೋಷಿಸಲಾಗಿದೆ.ಕೂಪನ್‌ನಲ್ಲಿ ಪ್ರಥಮ ಬಹುಮಾನವಾಗಿ ರೆಫ್ರಿಜರೇಟರ್, ದ್ವಿತೀಯ ಬಹುಮಾನ ವಾಷಿಂಗ್ ಮೆಷಿನ್, ತೃತೀಯ ಬಹುಮಾನ ಸ್ಮಾರ್ಟ್ ಟಿವಿ ಗ್ರಾಹಕರಿಗೆ ದೊರೆಯಲಿದೆ.ಅಲ್ಲದೆ ಐದು ಆಕರ್ಷಕ ಬಹುಮಾನಗಳು ಲಭ್ಯವಿದೆ.ಯಾವುದೇ ಆಭರಣ ಕೊಂಡರೂ ವೇಸ್ಟೇಜ್ ಅತ್ಯಲ್ಪವಾಗಿದ್ದು, ಇದು ಮಾರುಕಟ್ಟೆಯಲ್ಲಿಯೇ ಅತ್ಯಲ್ಪ ಪ್ರಮಾಣದ್ದಾಗಿದ್ದು ಗ್ರಾಹಕರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.ಗ್ರಾಹಕರಿಗೆ ಮಾಸಿಕ 500, 1000 ಹಾಗೂ 2000 ರೂ. ಪಾವತಿಯ ಕಂತುಗಳ ಮೂಲಕ ಚಿನ್ನ ಖರೀದಿಸುವ ಅವಕಾಶವೂ ಇದೆ.

ಮಳಿಗೆ ವಿಶೇಷ: ಆಭರಣ ಮಳಿಗೆಯು ಎರಡು ಅಂತಸ್ತಿನಲ್ಲಿ ಹರಡಿಕೊಂಡಿದ್ದು, ಕೆಳಗಿನ ಅಂತಸ್ತಿನಲ್ಲಿ ಚಿನ್ನಾಭರಣಗಳ ಶೋ ರೂಮ್ ಇದೆ.ಪುತ್ತೂರಿನ ಚಿನ್ನದಂತಹ ಗ್ರಾಹಕರ ಮನಸ್ಸಿಗೆ ಇದೊಂದು ಅತಿ ದೊಡ್ಡ ಜ್ಯುವೆಲ್ಲರಿ ಶೋರೂಮ್ ಆಗಿ ಕಾಣಲಿದೆ.ನೂತನ ಮಳಿಗೆಯಲ್ಲಿ ಗ್ರಾಹಕರಿಗೆ ವಿಪುಲವಾದ ಆಯ್ಕೆ ಮತ್ತು ಹಲವು ಅನುಕೂಲತೆಗಳನ್ನು ಒದಗಿಸಲಾಗುತ್ತಿದೆ.ಮಳಿಗೆಯಲ್ಲಿ ಬೆಳ್ಳಿಯ ಆಭರಣಗಳಿಗೆ ಪ್ರತ್ಯೇಕ ವಿಭಾಗ ಕೂಡ ಇದೆ. ಇದರ ಜೊತೆಗೆ ವಜ್ರದ ಆಭರಣಗಳು ಕೂಡಾ ಇವೆ.

LEAVE A REPLY

Please enter your comment!
Please enter your name here