ಬೆಳ್ತಂಗಡಿ ಭಜನಾ ಪರಿಷತ್ ಗೆ ನೂತನ ಪದಾಧಿಕಾರಿಗಳ ಆಯ್ಕೆ-ಅಧ್ಯಕ್ಷರಾಗಿ ವೆಂಕಟೇಶ್ ಭಟ್ ಕಜೆ, ಕಾರ್ಯದರ್ಶಿ ಚಂದ್ರಶೇಖರ್, ಉಪಾಧ್ಯಕ್ಷ ಜಯಪ್ರಸಾದ್ ಕಡಮ್ಮಾಜೆ

0

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ, ಭಜಕರಲ್ಲಿ ಹೊಸ ಉತ್ಸಾಹ ಮೂಡಿಸುತ್ತಿದ್ದ ಭಜನಾ ಪರಿಷತ್ ಬೆಳ್ತಂಗಡಿಗೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಸಿರಿಗ್ರಾಮೋದ್ಯೋಗ ಸಂಸ್ಥೆಯ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿಯಲ್ಲಿ ಬೆಳ್ತಂಗಡಿ ಭಜನಾ ಪರಿಷತ್ ನ ಅಧ್ಯಕ್ಷರಾಗಿ ವೆಂಕಟೇಶ್ ಭಟ್ ಕಜೆ ಇವರು ನೇಮಕಗೊಂಡಿದ್ದಾರೆ.ಭಜನಾ ಪರಿಷತ್ ನ ಉಪಾಧ್ಯಕ್ಷರಾಗಿ ಜಯಪ್ರಸಾದ್ ಕಡಮ್ಮಾಜೆ, ಕಾರ್ಯದರ್ಶಿಯಾಗಿ ಚಂದ್ರಶೇಖರ್, ಜೊತೆ ಕಾರ್ಯದರ್ಶಿಯಾಗಿ ಜಗನ್ನಾಥ ದೇವಾಡಿಗರನ್ನು ನೇಮಿಸಲಾಗಿದೆ.

16 ವಲಯ ಸಂಯೋಜಕರ ನೇಮಕ ಭಜನಾ ಪರಿಷತ್ ನಲ್ಲಿ 16 ವಲಯ ಸಂಯೋಜಕರನ್ನು ನೇಮಿಸಲಾಗಿದೆ. ಬೆಳ್ತಂಗಡಿ ವಲಯದಿಂದ ಗಣೇಶ್ , ಲಾಯಿಲಾದಿಂದ ಚಂದ್ರಶೇಖರ್, ಇಂದಬೆಟ್ಟು ಬೇಬಿ ಉಮೇಶ್, ನೆರಿಯಾ ಪಿ ಕೆ ರಾಜನ್, ಧರ್ಮಸ್ಥಳ ಹರೀಶ್ ಕಳೆಂಜ, ಮುಂಡಾಜೆ ವೆಂಕಟೇಶ್ ಭಟ್ ಕಜೆ, ಉಜಿರೆ ಸದಾಶಿವ ಬೈಪಾಡಿ, ಕೊಕ್ಕಡ ಕೃಷ್ಣಪ್ಪ ಗೌಡ, ನಾರಾವಿ ಯಶೋಧರ ಬಂಗೇರ, ಕಣಿಯೂರು ಜಯಪ್ರಸಾದ್ ಕಡಮ್ಮಾಜೆ, ತಣ್ಣೀರು ಪಂಥ ರಾಜಶೇಖರ, ಮಡಂತ್ಯಾರು ಪ್ರವೀಣ ಹೆಗ್ಡೆ, ಗುರುವಾಯನಕೆರೆ ಮೀನಾಕ್ಷಿ, ಹೊಸಂಗಡಿ ನಾರಾಯಣ, ಅಳದಂಗಡಿ ಸೋಮನಾಥ ಹಾಗೂ ವೇಣೂರು ವಲಯಕ್ಕೆ ಜಗನ್ನಾಥ ದೇವಾಡಿಗರನ್ನು ನೇಮಿಸಲಾಗಿದೆ.

LEAVE A REPLY

Please enter your comment!
Please enter your name here