ಕಾಂಗ್ರೆಸ್ ಸರಕಾರ ರಚನೆ ಹಿನ್ನೆಲೆ: ವಿವಿದೆಡೆ ಸಂಭ್ರಮಾಚರಣೆ

0

ಬೆಳ್ತಂಗಡಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ, ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ಕುಪ್ಪೆಟ್ಟಿ ನೆಕ್ಕಿಲು, ಕಣಿಯೂರು, ಪದ್ಮುಂಜ, ಶೂಂಠಿಪಳಿಕೆ, ಉರುವಾಲು ಪದವು, ಕಲ್ಲೇರಿ, ಕರಾಯದಲ್ಲಿ ವಿಜಯೋತ್ಸವ ನಡೆಯಿತು.

ವಾಹನ ಜಾತದ ಮೂಲಕ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ಬಳಿಕ ಸಿಹಿ ತಿಂಡಿ ಪಾನೀಯ ವಿತರಣೆ ಮಾಡಿದರು.

ಉರುವಾಲು ಗ್ರಾಮದ ಕಾರಿಂಜ ಬಾಯ್ತಾರಿನಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ವಿಜಯೋತ್ಸವ ನಡೆಯಿತು.

LEAVE A REPLY

Please enter your comment!
Please enter your name here