ಗಂಡಿಬಾಗಿಲಿನಲ್ಲಿ ಕ್ರಿಸ್ತೊತ್ಸವ-2023 ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ

0

ನೆರಿಯ : ಕ್ರಿಸ್ತೊತ್ಸವ 2023 ಮಕ್ಕಳ ಬೇಸಿಗೆ ಶಿಬಿರಕ್ಕೆ ಸಂತ ತೋಮಸರ ದೇವಾಲಯದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮೋಪದೇಶ ಕೇಂದ್ರದ ನಿರ್ದೇಶಕರಾದ ವಂದನಿಯ ಫಾಧರ್ ಟೋಮಿ ಮಟ್ಟಮ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಮಕ್ಕಳ ಬೆಳವಣಿಗೆ ಕೇವಲ ಪಠ್ಯ ಆಧಾರವಾಗಿರಬಾರದು, ಸಮಗ್ರ ವ್ಯಕ್ತಿತ್ವ ರೂಪಗೊಳಿಸುವ ಪ್ರಕ್ರಿಯೆಯಾಗಿ ಪರಿವರ್ತನೆ ಗೊಂಡಾಗ ಮಾತ್ರ ವ್ಯಕ್ತಿ ಯಿಂದ ಸಮಾಜಕ್ಕೆ ಉಪಯೋಗ ವಾಗುವುದು ಎಂದು ಫಾಧರ್ ಮಟ್ಟಮ್ ಈ ಸಂದರ್ಭದಲ್ಲಿ ಕಿವಿ ಮಾತು ಹೇಳಿದರು.ಧರ್ಮ, ಸಂಸ್ಕೃತಿ ಸಂಸ್ಕಾರ, ಇದರಲ್ಲಿ ತಿಳುವಳಿಕೆ ಹೆಚ್ಚಿದಂತೆ ವ್ಯಕ್ತಿ ಸಮಾಜ ಮುಖಿಯಾಗಿ ಬೆಳೆಯಲು ಕಾರಣ ವಾಗುವುದು ಎಂದು ಉದ್ಘಾಟನಾ ಸಮಾರಂಭದ ಅಧ್ಯಕ್ಷ ತೆ ವಹಿಸಿ ಕೆ ಎಸ್ ಎಂ ಸಿ ಎ ನಿರ್ದೇಶಕರಾದ ವಂದನಿಯ ಫಾಧರ್ ಶಾಜಿ ಮಾತ್ಯು ಹೇಳಿದರು.

ಕಾರ್ಯಕ್ರಮದಲ್ಲಿ ಚರ್ಚಿನ ಟ್ರಸ್ಟಿಗಳಾದ ಸೇಬಾಸ್ಟಿನ್ ಎಂ ಜೆ, ಮಾತ್ಯು ಪಿ ಎಂ, ಮುಖ್ಯ್ಯೋಪಾಧ್ಯಯರಾದ ಶ್ರೀ ಶಿಜು ಸಿ ವಿ ಫಾದರ್ ಮಲ್ವಿನ್ ಸಿಸ್ಟೆರ್ ಟ್ರೀಸ ಎಸ್ ಎ ಬಿ ಎಸ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here