ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ನಿವೃತ್ತ ಸಿಬ್ಬಂದಿಗಳಿಗೆ ಸನ್ಮಾನ

0

ಉಜಿರೆ : ಶಿಕ್ಷಣ ಎಂಬುದು ಪ್ರತಿಯೊಬ್ಬನಿಗೂ ಪ್ರಾಮುಖ್ಯವಾಗಿದ್ದು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆದರೆ ಗುರಿಯನ್ನು ತಲುಪಲು ಸಾಧ್ಯ” ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಧ.ಮಂ.ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಎ.14 ರಂದು ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ಶ್ರೀ ಧ.ಮಂ.ಎಜುಕೇಶನಲ್ ಸೊಸೈಟಿಯ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ,ನಿವೃತ್ತರಾದ ಸಿಬ್ಬಂದಿಗಳಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.ಇಸ್ಕಾನ್ ನ ಶ್ರೀಭಕ್ತಿ ವಿಕಾಸ್ ಸ್ವಾಮಿ ಮಹಾರಾಜ್, ಧ.ಮಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಇಸ್ಕಾನ್ ನ ಸ್ವಾಮೀಜಿ ಶ್ರೀರಾಮ ಚರಣಾರವಿಂದ ದಾಸ, ಎಸ್ ಡಿ ಎಂ ಐ ಟಿ ತಾಂತ್ರಿಕ ವಿಭಾಗದ ಸಿಇಒ ಪೂರನ್ ವರ್ಮ, ಉಪಸ್ಥಿತರಿದ್ದರು.
ಹೇಮಾವತಿ ವೀ. ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ದಂಪತಿಗೆ ಅಭಿನಂದನೆ ಸಲ್ಲಿಸಲಾಯಿತು.
ಎಸ್.ಡಿ.ಎಂ.ಇ ಸೊಸೈಟಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ.ಎಸ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕಿ ಸುಮಾ ಶ್ರೀನಾಥ್ ಪ್ರಾರ್ಥಿಸಿದರು.ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಸನ್ಮಾನಿತರ ವಿವರ ನೀಡಿದರು. ಶಿಕ್ಷಕ ರಾಮಕೃಷ್ಣ ಭಟ್ ಬೆಳಾಲು ಕಾರ್ಯಕ್ರಮ ನಿರೂಪಿಸಿದರು.ಎಸ್.ಡಿ.ಎಂ ಸಿಬಿಎಸ್ಇ ಶಾಲೆಯ ಪ್ರಿನ್ಸಿಪಾಲ್ ಮನಮೋಹನ್ ನಾಯಕ್ ವಂದಿಸಿದರು.


33ಮಂದಿಗೆ ಸನ್ಮಾನ: ನಿವೃತ್ತ ಆಂತರಿಕ ಲೆಕ್ಕ ಪರಿಶೋಧಕ ಸುಬ್ರಾಯ ವಿ.ಹೆಗ್ಡೆ, ಇ. ಎಸ್ಟೇಟ್ ಅಧಿಕಾರಿ ಯುವರಾಜ ಬಲ್ಲಾಳ್, ಶಾಲಾ ನಿವೃತ್ತ ಮುಖ್ಯಸ್ಥರಾದ ಶಶಿಕಲಾ.ಡಿ, ಕೆ.ರಾಮಣ್ಣ ನಾಯ್ಕ, ಜಯಭಾರತಿ, ಹರ್ಷ ಕೆ.ಎನ್, ವಸಂತ ಭಟ್, ಸುಬ್ರಮಣ್ಯ ಭಟ್.ಬಿ, ಜನಾರ್ದನ.ಬಿ.ತೋಳ್ಪಾಡಿತ್ತಾಯ, ಸದಾಶಿವ ಪೂಜಾರಿ ಸೂರ್ಯ ಪ್ರಕಾಶ್, ಧನ್ಯ ಕುಮಾರ್, ಯಶೋಧರ ಇಂದ್ರ, ವಿದ್ಯಾವತಿ, ಅಧ್ಯಾಪಕರಾದ ಬಿ.ಸಾವಿತ್ರಿ, ಕೃಷ್ಣಪ್ಪ ಗೌಡ.ಎ, ಸುಬ್ರಮಣ್ಯ ಉಪಾಧ್ಯಾಯ, ವೀಣಾ ಸರಸ್ವತಿ, ಮೇರಿ ಪಿರೇರಾ, ರೇಣುಕಾ ಕೆ.ಎಸ್, ರಮಾದೇವಿ, ಶಾಲಿನಿ.ಎಂ, ಶಿಕ್ಷಕೇತರ ವೃಂದದ ಜಿನರಾಜ ಪೂವಣಿ, ಧರ್ಮಪಾಲ, ವೀರೇಂದ್ರ ಕುಮಾರ್ ಜಿ, ಜಗತ್ಪಾಲ್, ಆದಪ್ಪ ಗೌಡ, ನೌಕರ ವೃಂದದ ಸುಶೀಲಾ, ಸೀತಮ್ಮ ಜಿನ್ನಪ್ಪ ಪೂಜಾರಿ, ಆನಂದ ಶೆಟ್ಟಿ, ಪದ್ದಣ್ಣ ಗೌಡ, ದೆಯ್ಯ, ಕುಸುಮಾ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here