ಸಾವ್ಯ: ಕರಂರ್ಬಲೆಕ್ಕಿಯಲ್ಲಿ ರಕ್ಷಿತ್ ಶಿವರಾಂ ಸಹಕಾರದಲ್ಲಿ ಕ್ರೀಡಾಂಗಣ ನಿರ್ಮಾಣ

0

ಸಾವ್ಯ: ಸಾವ್ಯ ಗ್ರಾಮದ ಕಂರ್ಬಲೆಕ್ಕಿಯಲ್ಲಿ ಸರಿಯಾದ ಆಟದ ಮೈದಾನ ಇಲ್ಲದೇ ಇಲ್ಲಿನ ಕ್ರೀಡಾಪಟುಗಳು ಪರಿತಪಿಸುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಪ್ರಮುಖರು ಹಾಗೂ ಯುವಜನರು ಸೇರಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ರವರನ್ನು ಭೇಟಿಯಾಗಿ ವಿಶಾಲವಾದ ಆಟದ ಮೈದಾನ ನಿರ್ಮಿಸಲು ತಾವು ಸಹಕಾರ ನೀಡಬೇಕೆಂದು ಕೇಳಿಕೊಂಡರು.

ಈ ವಿಚಾರವನ್ನು ಕೇಳಿ ತಕ್ಷಣವೇ ರಕ್ಷಿತ್ ಶಿವರಾಂ ರವರು ಕಂರ್ಬಲೆಕ್ಕಿ ಮೈದಾನದ ವಿಸ್ತರಣೆಗೆ ವಿಶೇಷ ಸಹಕಾರ ನೀಡಿದರು.

ಇದೀಗ ಇವರ ಪ್ರಯತ್ನದಿಂದ ಕ್ರೀಡಾಪಟುಗಳಿಗೆ ಅಗತ್ಯವಾಗಿ ಬೇಕಾದ ವಿಶಾಲವಾದ ಆಟದ ಮೈದಾನ ಸಿದ್ದಗೊಂಡಿದೆ.

LEAVE A REPLY

Please enter your comment!
Please enter your name here