ಡಿ. ಕೆ.ಆರ್.ಡಿ.ಎಸ್ – ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ

0

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ (ರಿ)ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರ ನೇತೃತ್ವದಲ್ಲಿ ಮಾ.18 ರಂದು ಹೆಚ್.ಐ.ವಿ ಸೋಂಕಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಸಾಂತೋಮ್ ಟವರ್ ಬೆಳ್ತಂಗಡಿ ಇಲ್ಲಿ ಆಯೋಜಿಸಲಾಗಿತ್ತು. ಅತಿಥಿಗಳಾಗಿ ಸೈಂಟ್ ಮೇರೀಸ್ ಚರ್ಚ್ ಕುಟ್ರುಪ್ಪಾಡಿ ಇಲ್ಲಿನ ಧರ್ಮ ಗುರುಗಳು ವಂ.ಫಾ. ಜೋಸ್ ಆಯಾಂಕುಡಿ ಇವರು ಪೌಷ್ಟಿಕ ಆಹಾರ ವಿತರಿಸಿ ಶುಭ ಹಾರೈಸಿದರು.

ಕುಟ್ರುಪ್ಪಾಡಿ ಚರ್ಚಿನ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಸದಸ್ಯರಾದ ಶ್ರೀಮತಿ ವಲ್ಸಮ್ಮ ಎ ಜೆ ಶುಭ ಹಾರೈಸಿದರು. ಚರ್ಚಿನ ಸಹಾಯಕ ಧರ್ಮಗುರುಗಳಾದ ವಂದನೀಯ ಫಾದರ್ ಡೋನಲ್. ಸಿ.ಎಮ್.ಸಿ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಲತಾ ಜೇಮ್ಸ್, ಸಮಾಜ ಸೇವಾ ಮೇಲ್ವಿಚಾರಕರಾದ ಶ್ರೀ ಮ್ಯಾಥ್ಯೂ. ಸೀರೋ ಮಲಬಾರ್ ಮಾತೃವೇದಿ ಅಧ್ಯಕ್ಷೆ ಶ್ರೀಮತಿ ಆನ್ಸಿ, ಸಿರೋ ಮಲಬಾರ್ ಪಿತೃವೇದಿ ಅಧ್ಯಕ್ಷ ತೋಮಸ್, ಸೀರೋ ಮಲಬಾರ್ ಯೂತ್ ಮೂವ್ಮೆಂಟ್ ಅಧ್ಯಕ್ಷರಾದ ನಿಖಿಲ್, ಕ್ರೆಡಿಟ್ ಯೂನಿಯನ್ ಅಧ್ಯಕ್ಷರಾದ ವರ್ಗೀಸ್, ಕೆ.ಸಿ.ಎಮ್.ಸಿ.ಎ ಅಧ್ಯಕ್ಷ ಜೋಸ್ ಎ. ಜೆ, ಸಿ.ಎಮ್.ಎಲ್ ಕಾರ್ಯಕರ್ತರು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ನವಚೈತನ್ಯ ಸಂಘದ ಅಧ್ಯಕ್ಷೆ ಶ್ರೀಮತಿ ಲಲಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿ.ಕೆ.ಆರ್. ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯಿ ಎ.ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಟ್ರುಪ್ಪಾಡಿ ಚರ್ಚಿನ ಎಲ್ಲಾ ಸಂಘಟನೆಗಳ ವತಿಯಿಂದ ಧನಸಹಾಯ ನೀಡಲಾಯಿತು. ಆಶಾ ಕಾರ್ಯಕರ್ತೆ ಶ್ರೀಮತಿ ಶಾರದಾ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಸಂಯೋಜಕಿ ಶ್ರೀಮತಿ ಸಿಸಿಲ್ಯಾ ತಾವ್ರೊ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಾರ್ಕ್ ಡಿ ಸೋಜರವರು ವಂದಿಸಿದರು.

LEAVE A REPLY

Please enter your comment!
Please enter your name here