ಉಜಿರೆ ಶ್ರೀ ಮಹಮ್ಮಾಯೀ ದೇವಸ್ಥಾನದಲ್ಲಿ ವಾರ್ಷಿಕ ಮಾರಿಪೂಜೆ

0

ಉಜಿರೆ: ಉಜಿರೆಯ ಶ್ರೀ ಮಹಮ್ಮಾಯೀ (ಮಾರಿಗುಡಿ)ದೇವಸ್ಥಾನದಲ್ಲಿ ವಾರ್ಷಿಕ ಮಾರಿಪೂಜೆ,ಗುಳಿಗ ದೈವದ ನೇಮೋತ್ಸವ ಹಾಗೂ ಗೊಂಬೆ ಕಳಿಸುವ ಕಾರ್ಯಕ್ರಮಗಳು ಮಾ 17 ರಂದು ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ಊರ ಭಕ್ತಾದಿಗಳ ಪಾಲ್ಗೊಳ್ಳುವಿಕೆಯೊಂದಿಗೆ  ವಿಧ್ಯುಕ್ತವಾಗಿ  ಸಂಭ್ರಮದಿಂದ ನಡೆಯಿತು.        ಕ್ಷೇತ್ರದ ನಾಲ್ವಿ ಕೆಯವರಾದ ಅನಂತರಾಮ ಮೂಡಣ್ಣಾಯ, ಪ್ರಕಾಶ ಕುದ್ದಣ್ಣಾಯ ,ಪರಾರಿ ವೆಂಕಟ್ರಮಣ ಹೆಬ್ಬಾರ್, ಮೋಹನ ಶೆಟ್ಟಿಗಾರ್, ಮೋಹನಕುಮಾರ್ ,ರಮೇಶ್ ಶೆಟ್ಟಿ, ಭರತ್ ಕುಮಾರ್, ರವಿಕುಮಾರ್ ಬರಮೇಲು  ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ದೇವಸ್ಥಾನವನ್ನು ವಿಶೇಷವಾಗಿ ಪುಷ್ಪ ಹಾಗೂ ವಿದ್ದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.

LEAVE A REPLY

Please enter your comment!
Please enter your name here