ಬೆಳ್ತಂಗಡಿ ತಾಲೂಕು‌ ಔಷಧಿ ವ್ಯಾಪಾರಿಗಳ ಸಂಘ:
ನೂತನ ಅಧ್ಯಕ್ಷರಾಗಿ ಶ್ರೀಧರ ಕೆ.ವಿ. ಆಯ್ಕೆ

0

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿ ಉಜಿರೆಯ ಸುರಕ್ಷಾ ಮೆಡಿಕಲ್ಸ್ ನ ಮಾಲಕರಾದ ಶ್ರೀಧರ ಕೆ.ವಿ.ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ಬೆಳ್ತಂಗಡಿ ಗಣೇಶ್ ಮೆಡಿಕಲ್ಸ್‌ನ ಮಾಲೀಕರಾದ ಮಾಧವ ಗೌಡ ಅವರು ಆಯ್ಕೆಯಾಗಿದ್ದಾರೆ.

ಇಂದು ನಡೆದ ಸಂಘದ ಸಭೆಯಲ್ಲಿ ಉಳಿದಂತೆ
ಅಶ್ವಿನಿ ಮೆಡಿಕಲ್ಸ್ ಬೆಳ್ತಂಗಡಿಯ ಚಂದ್ರಶೇಖರ್ ಹಾಗೂ ಕಜೆಕಾರ್ ಮೆಡಿಕಲ್ಸ್ ನ ನವೀನ್ ಚಂದ್ರ ಅವರುಗಳು ಗೌರವ ಸಲಹೆಗಾರರಾಗಿ ಆಯ್ಕೆಯಾದರೆ ಮಹಾವೀರ ಮೆಡಿಕಲ್ಸ್ ನ ಉದಯಕುಮಾರ್ ಉಪಾಧ್ಯಕ್ಷರಾಗಿ ,ಅಮರ್ ಡ್ರಗ್ ಹೌಸ್ ಬೆಳ್ತಂಗಡಿಯ ಗಣಪತಿ ಭಟ್ ಕೋಶಾಧಿಕಾರಿಯಾಗಿ, ಮಹಾಗಣಪತಿ ಎಂಟರ್ ಪ್ರೈಸಸ್ ನ ಪ್ರಕಾಶ್ ಸಂಚಾಲಕರಾಗಿ ಆಯ್ಕೆಯಾದರೆ ಬೆಳ್ತಂಗಡಿ ಸನ್ನದಿ ಮೆಡಿಕಲ್ಸ್ ನ ಶ್ರೀಮತಿ ಅಶ್ವಿನಿ ,ಉಜಿರೆ ಎಸ್.ಎ.ಮೆಡಿಕಲ್ಸ್ ನ ಪ್ರಕಾಶ್, ಅನ್ನಪೂರ್ಣ ಮೆಡಿಕಲ್ಸ್ ಧರ್ಮಸ್ಥಳದ ಶ್ರೀ ರಜತ್, ಬಾಲಾಜಿ ಮೆಡಿಕಲ್ಸ್ ಕಕ್ಕಿಂಜೆಯ ರಾಜೇಶ್, ಮಂಜುಶ್ರೀ ಮೆಡಿಕಲ್ಸ್ ವೇಣೂರಿನ ಶ್ರೀಮತಿ ಜಯಾ ಭಾರಧ್ವಜ್, ಗುರುವಾಯನಕೆರೆ ಚಂದ್ರಮೆಡಿಕಲ್ಸ್ ನ ವೆಂಕಟ್ರಮಣ ಭಟ್, ಸಮನ್ಯು ಮೆಡಿಕಲ್ಸ್ ಬಳ್ಳಮಂಜ ದ ಪುರಂದರ ಅವರುಗಳು ಜತೆ ಕಾರ್ಯದರ್ಶಿಗಳಾಗಿ ಆಯ್ಕೆಯಾದರು.

LEAVE A REPLY

Please enter your comment!
Please enter your name here