ಬೆಳ್ತಂಗಡಿ ತಾಲೂಕಿನ ಕಾಡುಗಳಲ್ಲಿ ಆವರಿಸುತ್ತಿರುವ ಬೆಂಕಿ: ಹೆಲಿಕಾಪ್ಟರ್ ಬಳಸಿ ಬೆಂಕಿ ನಂದಿಸಲು ಪತ್ರದ ಮೂಲಕ ಶಾಸಕ ಪೂಂಜರಿಂದ ಮನವಿ

0

ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ, ಶಿಬಾಜೆ, ಚಾರ್ಮಾಡಿ, ಸುಲ್ಕೇರಿ ಮುಂತಾದ ಪ್ರದೇಶಗಳ ಕಾಡುಗಳಲ್ಲಿ ಬೆಂಕಿ ಕಾಣಿಸಿಕೊಂಡು ವ್ಯಾಪಿಸ್ತಾ ಇದೆ.
ಅಗ್ನಿಶಾಮಕ ದಳದವರು, ಸ್ಥಳೀಯರು ಹರಸಾಹಸ ಪಟ್ಟರೂ ಪೂರ್ಣಪ್ರಮಾಣದಲ್ಲಿ ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮುಖ್ಯಮಂತ್ರಿಗಳ ಅಧೀನದಲ್ಲಿರುವ ಅರಣ್ಯ ಇಲಾಖೆಗೆ ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸುವಂತೆ ಕೋರಿ ಪತ್ರ ಬರೆದಿದ್ದಾರೆ.


ಇದರ ಪ್ರಕಾರ ಗೋವಾ ಬೇಸ್ ನಿಂದ ಸೇನಾ ಹೆಲಿಕಾಪ್ಟರ್ ಆಗಮಿಸಿ ಬೆಂಕಿ ನಂದಿಸಲು ನೆರವಾಗುವ ಭರವಸೆ ಸಿಕ್ಕಿದೆ ಎಂದು ಶಾಸಕ ಪೂಂಜ ರವರು ಮಾಧ್ಯಮದವರಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here