ನಾಳ ದೇವಸ್ಥಾನದ ಅಶ್ವಥ ಮರಕ್ಕೆ ಕಟ್ಟೆ ಕಟ್ಟಲು ಶಿಲಾನ್ಯಾಸ

0

ನಾಳ : ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಶ್ವಥ ಮರಕ್ಕೆ ಕಟ್ಟೆ ಕಟ್ಟಲು ಶಿಲಾನ್ಯಾಸ ಕಾರ್ಯಕ್ರಮ ಮಾ.4 ರಂದು ಜರುಗಿತು.
ನಾಳ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣ ರವರ ವೈದಿಕ ವಿಧಿ- ವಿಧಾನಗಳಿಂದ ನೆರವೇರಿತು.


ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಜಿ ,ಸದಸ್ಯರಾದ ಹಾಗೂ ಕಳಿಯ ಸಿ.ಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ಸಮಿತಿ ಸದಸ್ಯರಾದ ಬಿ.ಆಳ್ವ ನಾಳ, ದಿನೇಶ್ ಗೌಡ ಕಲಾಯಿತೊಟ್ಟು, ರಾಜೇಶ್ ಶೆಟ್ಟಿ ಅಡ್ಡಕೊಡಂಗೆ, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ ನಾಳ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೋಳ್ಯ, ದೇವಸ್ಥಾನದ ಪ್ರಬಂಧಕ ಗಿರೀಶ್ ಶೆಟ್ಟಿ ಗೇರುಕಟ್ಟೆ ,ನಾಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ, ಕಳಿಯ ಗ್ರಾಮದ ಪಂಚಾಯತು ಸದಸ್ಯ ಸುಧಾಕರ ಮಜಲು, ಜಾತ್ರೋತ್ಸವ ವಿವಿಧ ಸಮಿತಿ ಸದಸ್ಯರಾದ ಉಮನಾಥ ಶೆಟ್ಟಿ,ಯೋಗೀಶ್ ಅಡ್ಡ ಕೊಡಂಗೆ, ಸದಾಶಿವ ನೈಾಕ್, ಜಗನಾಥ ಪೂಜಾರಿ, ವಿವೇಕ್ ಆಳ್ವ, ಸೋಮಪ್ಪ ಗೌಡ, ಶಶಿಧರ ಶೆಟ್ಟಿ, ಜಯಚಂದ್ರ ಆಚಾರ್ಯ, ಉಮೇಶ್ ಗೌಡ, ಕಟ್ಟಡ ನಿರ್ಮಾಣ ಮೇಸ್ತ್ರಿ ಕೊರಗಪ್ಪ ನಾಳ, ದೇವಸ್ಥಾನದ ಸಿಬ್ಬಂದಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here