ಕಳಿಯ ಬೊಳ್ಳುಕಲ್ಲು ಅಂಗನವಾಡಿ ಕೇಂದ್ರ ಪಕ್ಕದ ವಿದ್ಯುತ್ ಕಂಬದಲ್ಲಿ ಬೆಂಕಿ ಜ್ವಾಲೆ

0

ಗೇರುಕಟ್ಟೆ : ಇಲ್ಲಿಯ ಎರುಕಡಪ್ಪು ಅಂಗನವಾಡಿ ಕೇಂದ್ರ ಪಕ್ಕದಲ್ಲಿರುವ ವಿದ್ಯುತ್ ಪೂರೈಕೆ ಮಾಡುವ ಟ್ರಾನ್ಸ್ ಫಾರ್ಮ್ ಕಂಬದಲ್ಲಿ ಬೆಂಕಿಯ ಜ್ವಾಲೆಯ ಘಟನೆ ಮಾ.4 ರಂದು ನಡೆಯಿತು.
ದೃಶ್ಯವನ್ನು ನೋಡಿದ ಪಕ್ಕದ ಅಂಗನವಾಡಿ ಕೇಂದ್ರದಲ್ಲಿರುವ ಮಕ್ಕಳು ಭಯಭೀತರಾಗಿ ಕೂಗಾಡುತ್ತಿದ್ದರು. ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಯವರು ಸ್ಥಳೀಯರಿಗೆ ಮಾಹಿತಿ ನೀಡಿದರು.


ಅಂಗನವಾಡಿ, ಶಾಲಾ ವಠಾರದಲ್ಲಿ ಹಾದು ಹೋಗುವ ವಿದ್ಯುತ್ ಪೂರೈಕೆ ತಂತಿಗಳನ್ನು ತೆರವು ಗೊಳಿಸಲು ಸರಕಾರದ ಆದೇಶವಿದ್ದರು ಇಲಾಖೆ ಇನ್ನು ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು. ಸಂಬಂಧಿಸಿದ ಇಲಾಖೆ ಹೆಚ್ಚುತ್ತುಕೊಂಡು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೈಗೊಳ್ಳ ಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.

LEAVE A REPLY

Please enter your comment!
Please enter your name here