ಶಿಬಾಜೆ ಪವರ್ ಮ್ಯಾನ್ ಗೆ ಬೆದರಿಕೆ : ಪೋಲಿಸ್ ರಿಗೆ ದೂರು

0

ಕೊಕ್ಕಡ : ಮೆಸ್ಕಾಂ ಕೊಕ್ಕಡ ಶಾಖೆಯ ಶಿಬಾಜೆ ಪವರ್ ಮ್ಯಾನ್ ಉಮೇಶ ಎಂಬವರಿಗೆ ಜೀವ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ.

ಉಜಿರೆ ಉಪವಿಭಾಗದ ಕೊಕ್ಕಡ ಮೆಸ್ಕಾಂ ಶಾಖೆಯ ಶಿಬಾಜೆ ಗ್ರಾಮದ ಪವರ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿರುವ ಉಮೇಶ ಎಂಬವರಿಗೆ ಮಾಧವ ಗೌಡ ಎಂಬವರು ಬೆದರಿಕೆ ಒಡ್ಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.

ಫೆ.26 ರಂದು 12 ಗಂಟೆಗೆ ಶಿಬಾಜೆ ಗ್ರಾಮದ ನಿರಾಣ ಎಂಬಲ್ಲಿ ಪೊಸೋಡಿ -ಬಂಗೇರಡ್ಕ ಎಂಬಲ್ಲಿಗೆ ಹೊಸದಾಗಿ ವಿದ್ಯುತ್ ಸಂಪರ್ಕದ ಕೆಲಸಕ್ಕೆ ನಾನು ಹೋಗಿದ್ದಾಗ ಮತ್ತು ಇಲಾಖೆಯಲ್ಲಿ ಟೆಂಡರ್ ಕೆಲಸ ಮಾಡಿಕೊಂಡಿರುವ ಪ್ರಕಾಶ್, ರಾಮಣ್ಣ ಎಂಬವರು ಕೆಲಸದ ನಿಮಿತ್ತ ಜತೆಯಲ್ಲಿದ್ದರು. ಈ ವೇಳೆ ಅಲ್ಲಿಗೆ ಜೀಪಿನಲ್ಲಿ ಬಂದ ಮಾಧವ ಗೌಡರು ಕರೆಂಟ್ ಕಂಬದ ಲೈನ್ ಗೆ ತಾಗುವ ಮರ ಕಡಿಯಿರಿ ಎಂದು ಹೇಳಿದರು. ವಿದ್ಯುತ್ ಸಂಪರ್ಕ ಮಾಡುವ ಸಂದರ್ಭ ಮರದ ಗೆಲ್ಲು ಕಡಿಯುವುದಾಗಿ ನಾನು ಹೇಳಿ ದಾಗ ಮಾಧವ ಗೌಡರು ನನಗೆ ಅವಾಚ್ಯ ವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿದ್ದಲ್ಲದೆ, ದೂಡಿ ಬೆದರಿಕೆ ಒಡ್ಡಿದ್ದಾರೆಂದು ಉಮೇಶರು ಬೆಳ್ತಂಗಡಿ ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here