ಮಾ.3 -7: ಬೆಳಾಲು ಮಾಯ ಮಹಾದೇವ ದೇವಸ್ಥಾನದ ಜಾತ್ರಾ ಮಹೋತ್ಸವ

0

ಬೆಳಾಲು : ಶ್ರೀ ಮಾಯ ಮಹಾದೇವ ದೇವಸ್ಥಾನ ಮಾಯ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಮಾ.3 ರಿಂದ 7 ರವರೆಗೆ ಆಲಂಬಾಡಿ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಮಾ.3 ರಂದು ಬೆಳಿಗ್ಗೆ ಗಣಹೋಮ, ಮಾಯ ಗುತ್ತು ಮನೆಯಲ್ಲಿ ದೈವಗಳಿಗೆ ಕಲಶಪರ್ವ, ಶಾರಿ ಹಾಕಿ ಗೊನೆ ಕಡಿಯುವುದು, ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಸಂಜೆ ತಂತ್ರಿಗಳ ಸ್ವಾಗತ, ತೋರಣ ಮುಹೂರ್ತ, ಧ್ವಜಾರೋಹಣ, ಉಗ್ರಾಣ ತುಂಬುವುದು, ಪೂಜೆ ಬಲಿ, ನಂತರ ಮಾಯ, ನಿಂತಿಕಲ್ಲು, ಕೊಲ್ಪಾಡಿ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಶಶಿಧರ ಒಡಿಪ್ರೊಟ್ಟು ಬಳಗದಿಂದ ಭಕ್ತಿ ಭಾವ ಸಂಗೀತ, ನಂತರ ಅಮ್ಮ ಕಲಾವಿದೆರ್ ಕುಡ್ಲ ಇವರು ಅಭಿನಯಿಸುವ ನಾಟಕ ‘ ಅಲೆ… ಬುಡಿಯೆರ್ ಗೆ ‘


ಮಾ.4 ಬೆಳಿಗ್ಗೆ ಗಣಹೋಮ, ಕಲಶ ಪೂಜೆ, ಕೊಲ್ಪಾಡಿ ಭಜನಾ ಮಂಡಳಿಯಿಂದ ಭಜನೆ, ಸಂಜೆ ದುರ್ಗಾ ಪೂಜೆ, ರಾತ್ರಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಾಯ ನಮ್ಮ ಜವನೆರ್ ಕಲಾತಂಡ ಮಾಯ ಫ್ರೆಂಡ್ಸ್ ಇವರಿಂದ ‘ರಾಂಪನ ಗಮ್ಮತ್’, ಮತ್ತು ಅನನ್ಯ ವಿ. ಎಸ್. ಇವರಿಂದ ನೃತ್ಯ ವೈವಿದ್ಯ,
ಮಾ.5 ಬೆಳಿಗ್ಗೆ ಗಣಹೋಮ, ಸೂಡರ ಬಲಿ ಉತ್ಸವ, ಅನಂತೋಡಿ ಪುರುಷರ ಮತ್ತು ಮಹಿಳಾ ತಂಡದಿಂದ ಭಜನೆ, ರಾತ್ರಿ ಚಂದ್ರ ಮಂಡಲ ಉತ್ಸವ, ವಸಂತ ಕಟ್ಟೆ ಪೂಜೆ, ಉದಯ ಕೆ. ಬಳಗದಿಂದ ನೃತ್ಯ ವೈವಿದ್ಯ, ವಿಷ್ಣು ಕಲಾವಿದೆರ್ ಮದ್ದಡ್ಕ ಇವರಿಂದ ನಾಟಕ ” ಆಯೆ ಏರದಿಪ್ಪು “
ಮಾ.6 ಬೆಳಿಗ್ಗೆ ಗಣಹೋಮ, ದರ್ಶನ ಬಲಿ, ಬಟ್ಟಲು ಕಾಣಿಕೆ, ಸಂಜೆ ಜನಾರ್ಧನ ಪೆಲತ್ತಡಿ ಬಳಗದಿಂದ ಭಕ್ತಿ ಗಾನ ಸುಧೆ, ರಾತ್ರಿ ಮಾಯ ಗುತ್ತು ಮನೆಯಿಂದ ದೈವಗಳ ಭಂಡಾರ ಆಗಮನ, ರಥೋತ್ಸವ, ಶ್ರೀ ಭೂತ ಬಲಿ, ಶಯನೋತ್ಸವ
ಮಾ.7 ಬೆಳಿಗ್ಗೆ ಗಣಹೋಮ, ಕವಾಟೋದ್ಘಾಟನೆ, ಮಹಾ ಪೂಜೆ, ಸಂಜೆ ಅವಭ್ರತ,, ಧ್ವಜಾವರೋಹಣ, ರಂಗ ಪೂಜೆ, ರಾತ್ರಿ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳಿಗೆ ನೇಮ ಬಲಿ ನಂತರ ಗುತ್ತಿನ ಮನೆಗೆ ಭಂಡಾರ ನಿರ್ಗಮನ ಮಾ.8 ಬೆಳಿಗ್ಗೆ ಗಣಹೋಮ, ದೇವಸ್ಥಾನದ ನಾಗಬನದಲ್ಲಿ ನಾಗತಂಬಿಲ ಸೇವೆ ಸಂಪ್ರೋಕ್ಷಣೆ, ಮಂಗಲ, ತುಲಾಭಾರ ಸೇವೆ ನಡೆಯಲಿದೆ.

ಪ್ರತಿ ದಿನ ಸಂಜೆ ಶ್ರೀ ಮಾಯಾಮಹೇಶ್ವರ ಭಜನಾ ಮಂಡಳಿಯ ಪುರುಷರ, ಮಹಿಳೆಯರ ಮತ್ತು ಮಕ್ಕಳ ತಂಡದಿಂದ ಭಜನಾ ಕಾರ್ಯಕ್ರಮ ಹಾಗೂ ಪ್ರತಿ ದಿನ ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here