ಬೆಳ್ತಂಗಡಿ: ಪಂಚಾಯತ್ ರಾಜ್ ಇಂಜಿನಿಯರ್ ರೂಪ ಲೋಕಾಯುಕ್ತ ಪೊಲೀಸರ ಕೈಗೆ

0


ಬೆಳ್ತಂಗಡಿ : ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಮಂಗಳೂರು ಕೇಂದ್ರದ ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ್ ರೂಪ ಲೋಕಾಯುಕ್ತ ಪೊಲೀಸರ ಕೈಗೆ ಫೆ.20 ರಂದು ಸಿಕ್ಕಿಬಿದ್ದಿದ್ದಾರೆ.


ಬೆಳ್ತಂಗಡಿ ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರದ
ಬಾಲಕರ ವಿದ್ಯಾರ್ಥಿನಿಲಯದ ಸಭಾಂಗಣ ನಿರ್ಮಾಣ
ಕಾಮಗಾರಿಯೊಂದರ ಅಂತಿಮ ಬಿಲ್ ಪಾವತಿಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಕಡತಕ್ಕೆ ಸಹಿ ಹಾಕಲು ರೂ.10 ಸಾವಿರ ಲಂಚ ನೀಡುವಂತೆ ರೂಪ ರವರು ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಕನ್ಯಾಡಿ ಗ್ರಾಮದ ಗುರಿಪಳ್ಳದ ಗುತ್ತಿಗೆದಾರರೊಬ್ಬರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಣವನ್ನು ವಶಕ್ಕೆ ಪಡೆದು ಕುಮಾರಿ ರೂಪರನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here