ಬೆಳ್ತಂಗಡಿ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯ ಮನ್ಮಹಾರಥೋತ್ಸವ

0

ಬೆಳ್ತಂಗಡಿ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ. 13 ರಿಂದ ಪ್ರಾರಂಭಗೊಂಡು ಫೆ. 22 ರವರೆಗೆ ನಡೆಯಲಿದೆ.
ಫೆ.20 ರಂದು ಬೆಳಿಗ್ಗೆ ಉತ್ಸವ, ದೇವರ ಬಲಿ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಬೆಳ್ತಂಗಡಿ ಹಳೆಕೋಟೆ ಭಗವಾನ್ ಶಿರಡಿ ಸಾಯಿ ಸತ್ಯಸಾಯಿ ಸೇವಾಕ್ಷೇತ್ರ ಇವರಿಂದ ಭಜನೆ ನಡೆಯಿತು. ರಾತ್ರಿ ದೇವರ ಉತ್ಸವ, ನಂತರ ಶ್ರೀ ಮನ್ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು.


ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರು ಜಯವರ್ಮರಾಜ ಬಳ್ಳಾಲ್ ಕೆಲ್ಲಗುತ್ತು ಮತ್ತು ಕುಟುಂಬಸ್ಥರು, ತಂತ್ರಿಗಳಾದ ನಂದ ಕುಮಾರ್ ಕೊಯ್ಯೂರು, ಅರ್ಚಕರು ಹಾಗೂ ಊರಿನ ಗ್ರಾಮಸ್ಥರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here