ಉಜಿರೆ ಶ್ರೀ ಧ. ಮಂ. ಪ. ಪೂ. ಕಾಲೇಜಿನಲ್ಲಿ ವಿಜಯರಾಘವ ಪಡ್ವೆಟ್ನಾಯರಿಗೆ ಶ್ರದ್ಧಾಂಜಲಿ

0

ಉಜಿರೆ :ಸಾಮಾಜಿಕ, ಧಾರ್ಮಿಕ , ಸಾಂಸ್ಕೃತಿಕ ಇತ್ಯಾದಿಯಾಗಿ ಬಹುಮುಖಿ ಸಾತ್ವಿಕ ವ್ಯಕ್ತಿತ್ವ ವಿಜಯರಾಘವ ಪಡ್ವೆಟ್ನಾಯರದ್ದು . ಇವರು ಸಮಾಜದೊಂದಿಗೆ ಸದ್ಭಾವನೆ ಬೆಳೆಸಿಕೊಂಡ ಅಪೂರ್ವ ವ್ಯಕ್ತಿಯಾಗಿದ್ದರು. ಇವರ ಆದರ್ಶ ಅನುಕರಣೀಯ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ದಿನೇಶ ಚೌಟ ಹೇಳಿದರು.
ಇವರು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರಾದ ವಿಜಯರಾಘವ ಪಡ್ವೆಟ್ನಾಯ ಇವರು ನಿಧನರಾದ ಪ್ರಯುಕ್ತ ಕಾಲೇಜಿನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಎಲ್ಲಾ ವಿಭಾಗಗಳ ಮುಖ್ಯಸ್ಥರು , ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ಪಡ್ವೆಟ್ನಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನ ಕುಮಾರ ಐತಾಳ್ ಪಡ್ವೆಟ್ನಾಯರ ಜೀವನದ ಕೆಲವು ಮಜಲುಗಳನ್ನು ಹಾಗೂ ಅವರ ಬದುಕಿನ ಕಿರು ಚಿತ್ರಣ ನೀಡಿ , ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here