ಗೇರುಕಟ್ಟೆ: ಟೈಲರ್ಸ್ ಅಸೋಸಿಯೇಶನ್ ವಲಯ ಸಮಿತಿಯ ಮಹಾಸಭೆ

0

ಗೇರುಕಟ್ಟೆ : ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಶನ್ ಗೇರುಕಟ್ಟೆ ವಲಯ ಸಮಿತಿಯ ಮಹಾಸಭೆಯು ಫೆ.12 ರಂದು ಗೇರುಕಟ್ಟೆ ಕೊರಂಜ ಶಾಲಾ ವಠಾರದಲ್ಲಿ ವಲಯದ ಅಧ್ಯಕ್ಷ ರವೀಂದ್ರ ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶಿ ಕುಶಾಲಪ್ಪ ಗೌಡ, ಜಿಲ್ಲಾ ಸಮಿತಿ ಸದಸ್ಯರಾದ ವಸಂತ್ ಪೂಜಾರಿ, ಸ್ವಾತಿ ಟೈಲರ್, ಕ್ಷೇತ್ರ ಸಮಿತಿಯ ಅಧ್ಯಕ್ಷೆ ವೇದಾವತಿ ಜನಾರ್ಧನ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ನಾಗೇಶ್ ಕುಮಾರ್, ಉಜಿರೆ ವಲಯದ ಕಾರ್ಯದರ್ಶಿ ಪ್ರೇಮ ಗೇರುಕಟ್ಟೆ ಖಜಾಂಚಿ, ರಮೇಶ್ ಪ್ರಭು ಹಾಗೂ ವಲಯ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ಐಡಿ ಕಾರ್ಡ್ ವಿತರಣೆ ಮತ್ತು ಹೊಸ ಸಮಿತಿಯನ್ನು ರಚನೆ ಮಾಡಲಾಯಿತು. ವಲಯ ಸಮಿತಿಯ ಸದಸ್ಯ ಸುನೀತಾ ಕರಾಯ ಸ್ವಾಗತಿಸಿದರು. ಜ್ಯೋತಿ ಮಧ್ವರಾಜ್ ಧನ್ಯವಾದವಿತ್ತರು. ಜಿಲ್ಲಾ ಕಾರ್ಯದರ್ಶಿ ಕುಶಾಲಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here