ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಬೆಳಾಲು ಪ್ರೌಢಶಾಲೆಗೆ ಬಹುಮಾನ

0

ಬೆಳಾಲು: ಶ್ರೀ ಸತ್ಯಸಾಯಿ ಸೇವಾ ಪ್ರತಿಷ್ಠಾನ ರಿ. ಕರ್ನಾಟಕ ರಾಜ್ಯ ಇದರ ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾ ಮಟ್ಟದ ಪ್ರಬಂಧ ರಚನೆ ಸ್ಪರ್ಧೆಯಲ್ಲಿ ಬೆಳಾಲು ಪ್ರೌಢಶಾಲಾ ವತಿಯಿಂದ ಹತ್ತನೇ ತರಗತಿಯ ಶ್ರಾವ್ಯ ಎಸ್. ವಿ. , ಶ್ರಾವ್ಯ ಪಿ , ಮಹಮ್ಮದ್ ತಾಹಿರ್ ಮತ್ತು ಸ್ವಸ್ತಿಕ್ ಇವರು ಪಾಲ್ಗೊಂಡಿದ್ದರು. ಇವರಲ್ಲಿ ಶ್ರಾವ್ಯ ಪಿ. ಯವರು ತೃತೀಯ ಬಹುಮಾನವನ್ನು ಪಡೆದಿರುತ್ತಾರೆ.
ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ, ಮಾನವ ಸೇವೆಯೇ ಮಾಧವ ಸೇವೆ ಮತ್ತು ಇರುವುದೊಂದೇ ಧರ್ಮ ಪ್ರೀತಿಯ ಧರ್ಮ ಈ ವಿಷಯಗಳಲ್ಲಿ ವಿದ್ಯಾರ್ಥಿಗಳು ಪ್ರಬಂಧ ರಚನೆ ಮಾಡಿದ್ದರು.
ಸ್ಪರ್ಧೆಯಲ್ಲಿ ಬಹುಮಾನಿತ ಮತ್ತು ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಶ್ರೀಸತ್ಯ ಸಾಯಿ ಸೇವಾ ಪ್ರತಿಷ್ಠಾನದ ಪ್ರಮುಖರಾದ ಬೆಳ್ತಂಗಡಿಯ ಕೃಷ್ಣಪ್ಪ ಪೂಜಾರಿ ಶಾಲೆಗೆ ಆಗಮಿಸಿ ಪಾರಿತೋಷಕ ಮತ್ತು ಅರ್ಹತಾ ಪತ್ರವನ್ನು ವಿತರಿಸಿದರು.

LEAVE A REPLY

Please enter your comment!
Please enter your name here