ಕರಂಬಾರು :ತೆಂಗಿನಕಾಯಿ ತಲೆಗೆ ಬಿದ್ದು ಕೃಷಿಕ ಸಾವು

0

ಕರಂಬಾರು: ತೋಟದಲ್ಲಿ ದೊಂಟಿಯಲ್ಲಿ ತೆಂಗಿನಕಾಯಿ ತೆಗೆಯುವ ಸಂದರ್ಭದಲ್ಲಿ ತೆಂಗಿನಕಾಯಿ ತಲೆಗೆ ಬಿದ್ದು ಕೃಷಿಕವೋರ್ವರು ಮೃತಪಟ್ಟ ಘಟನೆ ಕರಂಬಾರುವಿನ ಕಾಪಿನಡ್ಕದಲ್ಲಿ ಫೆ 8 ರಂದು ನಡೆದಿದೆ.

ಕರಂಬಾರು ಗ್ರಾಮದ ಕೇಳ್ಕರ ಕಾಪಿನಡ್ಕ ನಿವಾಸಿ ಪ್ರಗತಿಪರ ಕೃಷಿಕ ಸತೀಶ್ ರಾವ್ (58ವ) ಧಾರುಣವಾಗಿ ಸಾವಿಗೀಡಾದ ದುರ್ದೈವಿ.

ತೋಟದಲ್ಲಿ ತೆಂಗಿನಕಾಯಿ ತೆಗೆಯುವ ಸಂದರ್ಭ ಹಠಾತ್ತಾಗಿ ತೆಂಗಿನಕಾಯಿ ಮೈಮೇಲೆ ಬಿದ್ದ ಪರಿಣಾಮ ತಲೆ ಹಾಗೂ ಕುತ್ತಿಗೆಗೆ ಗಂಭೀರ ಪ್ರಮಾಣದ ಗಾಯವಾಗಿದ್ದು ಕೂಡಲೇ ಉಜಿರೆಯ ಖಾಸಾಗಿ ಆಸ್ಪತ್ರೆಗೆ ಸೇರಿಸಿದರು ಅವಾಗಲೇ ಮೃತಪಟ್ಟಿದ್ದರು.

ಸಾಮಾಜಿಕವಾಗಿ, ಧಾರ್ಮಿಕವಾಗಿ ಗುರುತಿಸಿಕೊಂಡಿದ್ದು, ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ಮೃತರು ಪತ್ನಿ ಗೀತಾ ರಾವ್, ಮೂವರು ಮಕ್ಕಳಾದ ಸ್ವಾತಿ ರಾವ್, ಸೌರಭ ರಾವ್, ಸಮರ್ಥನ್ ರಾವ್ ,ಸಹೋದರರಾದ ರಾಮಚ್ಚಂದ್ರ ರಾವ್,ನಾರಾಯಣ ರಾವ್,ರವೀಂದ್ರ ರಾವ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.ಒರ್ವೆ ಮಗಳು ಜರ್ಮನಿಯಲ್ಲಿದ್ದು ಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here