ಪಡ್ಡ್ಯಾರಬೆಟ್ಟ ಕ್ಷೇತ್ರಕ್ಕೆ ನೂತನ ಬಸವನ ಆಗಮನ

0

ವೇಣೂರು: ಪೆರಿಂಜೆಯ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನಕ್ಕೆ ಹೊಸ ಬಸವನನ್ನು ಫೆ. 7ರಂದು ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ತರಲಾಯಿತು.


ಪ್ರಶ್ನಾಪೂರ್ವಕ ಕ್ಷೇತ್ರಕ್ಕೆ ಹೊಸ ಬಸವನ ಆಯ್ಕೆ ನಡೆದು ಕ್ಷೇತ್ರ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ ಕುಮಾರ್ ಹಾಗೂ ಗುತ್ತುಬರ್ಕೆಯವರ ಉಪಸ್ಥಿತಿಯಲ್ಲಿ ಮರೋಡಿಯಿಂದ ಮೆರವಣಿಗೆ ಮೂಲಕ ಕರೆತರಲಾಯಿತು. ಕ್ಷೇತ್ರದ ಅಸ್ರಣ್ಣರಾದ ವೇ|ಮೂ| ರಾಮದಾಸ ಅಸ್ರಣ್ಣರ ವಿವಿಧ ಧಾರ್ಮಿಕ ವಿಧಾನಗಳನ್ನು ನೆರವೇರಿಸಿದರು. ಪೆರಿಂಜೆ ರಾಜ್ಯಗುತ್ತುವಿನ ಪಿ. ಜಯರಾಜ್ ಕಂಬಳಿ, ಕರಿಮಣೇಲು ಮಾಗಣೆಗುತ್ತುವಿನ ವಿನಯ ಕುಮಾರ್ ಸೇಮಿತ, ವಿಕಾಸ್ ಜೈನ್, ವಿಶ್ವಾಸ್ ಜೈನ್, ಗುರಿಕಾರರು ಹಾಗೂ ವಿವಿಧ ಗ್ರಾಮದ ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here