ಮುಂಡಾಜೆ: ಬಂಟರ ಗ್ರಾಮ ಸಮಿತಿಯಿಂದ ವಿದ್ಯಾರ್ಥಿ ವೇತನ ವಿತರಣೆ

0

ಮುಂಡಾಜೆ :ಬಂಟರ ಗ್ರಾಮ ಸಮಿತಿ ಮುಂಡಾಜೆ ಇದರ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮ ಫೆ.5 ರಂದು ನಡೆಸಲಾಯಿತು.

ದಿ| ಮಂಡ್ರುಪಾಡಿ ನಾರಾಯಣಶೆಟ್ಟಿ ಇವರ ಸ್ಮರಣಾರ್ಥ ಮನೆಯವರು ಈ ವಿದ್ಯಾರ್ಥಿ ವೇತನದ ಮೊತ್ತವನ್ನು ನೀಡಿದ್ದರು. ವಿಜಯಕುಮಾರ್ ರೈ ರವರ ಮನೆಯಲ್ಲಿ ಆಯೋಜಿಸಿದ್ದ ಗ್ರಾಮ ಸಮಿತಿ ಮಾಸಿಕ ಸಭೆಯಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅಗರಿ ಇವರು ವಹಿಸಿ, ವಿದ್ಯಾರ್ಥಿಗಳಿಗೆ ಶುಭ ಕೋರಿದರು. ವೇದಿಕೆಯಲ್ಲಿ ಸಮಿತಿ ಮುಖ್ಯಸ್ಥರುಗಳಾದ ರಾಮಣ್ಣ ಶೆಟ್ಟಿ ಅಗರಿ, ವಿಶ್ವನಾಥ ಶೆಟ್ಟಿ, ಮುಂಡ್ರುಪಾಡಿ, ದಯಾನಂದ ಶೆಟ್ಟಿ ಮುಂಡ್ರುಪಾಡಿ, ವಿಜಯಕುಮಾರ್ ರೈ, ಹಿರಿಯರಾದ ಚಂದಪ್ಪ ಶೆಟ್ಟಿ ಕುಳೂರು ಇವರು ಉಪಸ್ಥಿತರಿದ್ದರು. ಬಂಟ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿನೀತ್ ಶೆಟ್ಟಿ ಇವರು ಪ್ರಾರ್ಥಿಸಿ, ನವೀತ್ ಶೆಟ್ಟಿ ಇವರು ನಿರೂಪಿಸಿದ ಕಾರ್ಯಕ್ರಮದಲ್ಲಿ, ಹರ್ಷಿತ್ ಶೆಟ್ಟಿ ಇವರು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here