ಬೈಲಂಗಡಿ ಸ್ವ ಸಹಾಯ ಸಂಘಗಳ ವಾರ್ಷಿಕ ಮಹಾಸಭೆ

0

ಬೆಳ್ತಂಗಡಿ : ಬೈಲಂಗಡಿ ಸ್ವ ಸಹಾಯ ಸಂಘಗಳ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರುಗಳಾದ ಲಕ್ಷ್ಮಣ ಗೌಡ ಕಲ್ಲರಿಗೆ, ಶೇಖರ ಪೂಜಾರಿ, ಕಳೆಂಜೊಟ್ಟು ಮತ್ತು ಜಗನ್ನಾಥ ಪೂಜಾರಿ ಪರಾರಿ ಇವರ ಅಧ್ಯಕ್ಷತೆಯಲ್ಲಿ ಅಣ್ಣಿ ಗೌಡ ಹೊಸ ಒಕ್ಲು ಇವರ ಮನೆ ವಠಾರದಲ್ಲಿ ನಡೆಯಿತು.

ಪ್ರಾಸ್ತಾವಿಕವಾಗಿ ಲಕ್ಷ್ಮಣ ಗೌಡ ಕಲ್ಲರಿಗೆ ಇವರು ಸಂಘ ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡಿದರು.
ಸಂಘದ ವಾರ್ಷಿಕ ಲೆಕ್ಕಪತ್ರವನ್ನು ಕಾರ್ಯದರ್ಶಿಗಳಾದ ಸನತ್ ಕುಮಾರ್ ಮೂರ್ಜೆ, ಶಿವಪ್ರಸಾದ್ ಗೌಡ ಬಳ್ಳಿ, ವಿಶ್ವನಾಥ ಗೌಡ, ಗೋಲಿದಡಿ ಇವರು ಮಂಡನೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೆನರಾ ಬ್ಯಾಂಕ್ ಕಕ್ಕಿಂಜೆ ಇದರ ಮೆನೇಜರ್ ನಿಶಾನ್ ನಿಗಂ ರವರು ಸ್ವ ಸಹಾಯ ಸಂಘದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ನಾಗರಿಕ ಸೇವಾ ಟ್ರಸ್ಟ್ ಗುರುವಾಯನಕೆರೆ ಇದರ ಸಂಯೋಜಕರಾದ ಬಾಬು.ಎ ರವರು ಸ್ವ ಸಹಾಯ ಸಂಘಗಳ ಸಂರ್ಪಕ ಮತ್ತು ನಿರ್ವಹಣೆಯ ಬಗ್ಗೆ ಮಾತನಾಡುತ್ತಾ, ಟ್ರಸ್ಟ್ ನ ಕಾರ್ಯವೈಖರಿಯ ಬಗ್ಗೆ ತಿಳಿಸಿದರು.
ನಂತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಅಧಿಕಾರ ಹಸ್ತಾಂತರಿಸಲಾಯಿತು.
ಕುಮಾರಿ ದೀಕ್ಷಿತಾ, ಅರ್ಬಿ ಮತ್ತು ಕುಮಾರಿ ದೀಪಿಕಾ ಹೊಸ ಒಕ್ಲು ಪ್ರಾರ್ಥನೆ ಹಾಡಿದರು. ಬಾಲಕೃಷ್ಣ ಗೌಡ ಪಾದೆ ಸ್ವಾಗತಿಸಿ, ಶೇಖರ ಪೂಜಾರಿ ಕಳೆಂಜೊಟ್ಟು ಧನ್ಯವಾದವಿತ್ತರು. ಸನತ್ ಕುಮಾರ್ ಮೂರ್ಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here