ನಲಿಕೆಯವರ ಸಮಾಜ ಸೇವಾ ಸಂಘದಿಂದ ಧರ್ಮಸ್ಥಳ ಡಾ. ಡಿ. ಹೆಗ್ಗಡೆಯವರ ಭೇಟಿ

0

ಬೆಳ್ತಂಗಡಿ: ನಲಿಕೆಯವರ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ರಾಜ್ಯ ಸಭೆಯ ಸಂಸದರೂ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಗಳಾಗಿರುವ ಡಿ. ವೀರೇಂದ್ರ ಹೆಗ್ಗಡೆಯವರನ್ನು ಜ.30 ರಂದು ಭೇಟಿ ಮಾಡಲಾಯಿತು.

ಈ‌ ಸಂದರ್ಭದಲ್ಲಿ ಸಂಘದ ಮೂಲಭೂತ ಸೌಕರ್ಯಗಳಿಗಾಗಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಮನವಿಗೆ ಅವರು ಉತ್ತಮ ಸ್ಪಂದನೆ ನೀಡಿದರು.

ನಿಯೋಗದಲ್ಲಿ ಸಂಘದ ಅಧ್ಯಕ್ಷ ಎಸ್.ಪ್ರಭಾಕರ , ಉಪಾಧ್ಯಕ್ಷ ರಾಮು ಶಿಶಿಲ , ಕಾರ್ಯದರ್ಶಿ ತಿಮ್ಮಪ್ಪ, ಸದಸ್ಯರುಗಳಾದ ವಿಜಯ್, ವಿನಯ್, ಓಬಯ್ಯ, ಸ್ಥಾಪಕ ಅಧ್ಯಕ್ಷ ಶೀನ ಲ್ಯಾಲ, ಮಾಜಿ ಕಾರ್ಯದರ್ಶಿ ಅನಂತ ಮುಂಡಾಜೆ, ಮಾಜಿ ಯುವ ವೇದಿಕೆ ಅಧ್ಯಕ್ಷ ರವಿ ಎಂ.ಎಲ್ ಮುಂಡಾಜೆ ಮತ್ತು ಸಂಜೀವ ಬೆಳ್ತಂಗಡಿ, ಮಾಜಿ ಯುವ ವೇದಿಕೆ ಕಾರ್ಯ ದರ್ಶಿ ರಮೇಶ್ ಕೇಳ್ತಾಜೆ, ಸುಜಿತ್ ಮುಂಡಾಜೆ ಮತ್ತು ಅರುಣ್ ಪೆಜತ್ತಕಾಡು ಇವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here