ಕಣಿಯೂರು: ವರದಕ್ಷಿಣೆ ಹಿಂಸೆ ಆರೋಪ: ನಾಲ್ವರ ಮೇಲೆ ಪ್ರಕರಣ ದಾಖಲು

0

ಕಣಿಯೂರು : ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಆರೋದು ನಿವಾಸಿ ಮುಹಮ್ಮದ್ ಎಂಬವರು ವರದಕ್ಷಿಣೆ ಹಾಗೂ ಚಿನ್ನ ತರುವಂತೆ ಒತ್ತಾಯಿಸಿ ದಿನ ನಿತ್ಯ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಿ ಮನೆಯಿಂದ ಹೊರ ಹಾಕಿದ್ದಾರೆಂದು ಆರೋಪಿಸಿ, ಅವರ ಪತ್ನಿ ಕಣಿಯೂರು ಗ್ರಾಮದ ಪದ್ಮುಂಜದ ಅಸ್ಮಾ ಎಂಬವರು ಪುಂಜಾಲಕಟ್ಟೆ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪುಂಜಾಲಕಟ್ಟೆ ಪ್ರಭಾರ ಠಾಣಾಧಿಕಾರಿ ನಂದಕುಮಾರ್ ರವರು ಮಹಿಳೆ ನೀಡಿದ ದೂರಿನಂತೆ ಆರೋಪಿಗಳಾದ ಮುಹಮ್ಮದ್. ಅವರ ಮಕ್ಕಳಾದ ಇರ್ಫಾನ್, ರಮೀಝ, ಬುಶ್ರಾ ಎಂಬವರ ಮೇಲೆ ವರದಕ್ಷಿಣೆ ವಿರೋಧಿ ಕಾಯ್ದೆ ಐ ಪಿ ಸಿ 1860(U/S 498A 323 504 506.34 ಡೌರಿ ಕಾಯ್ದೆ 1961 (U/S 3.4 )ರಂತೆ ಜ 17 ರಂದು ಪ್ರಕರಣ ದಾಖಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here