ಬೆಳಾಲು ಅನಂತೋಡಿ ದೇವಸ್ಥಾನದಲ್ಲಿ ಸಂಕ್ರಮಣ ರಂಗಪೂಜೆ

0

ಬೆಳಾಲು ಇಲ್ಲಿಯ ಅನಂತೋಡಿ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಜ.14 ರಂದು ಮಕರ ಸಂಕ್ರಮಣದಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ಮತ್ತು ಶ್ರೀಮತಿ ವಿದ್ಯಾ ಶ್ರೀನಿವಾಸ ಮತ್ತು ಮನೆಯವರು ಶ್ರೀಸೌಧ ಬೆಳಾಲು ಇವರ ಸೇವಾರ್ಥವಾಗಿ ಶ್ರೀ ದೇವರಿಗೆ ರಂಗ ಪೂಜೆ, ಶ್ರೀ ಶಾಸ್ತಾರ ( ಅಯ್ಯಪ್ಪ) ದೇವರಿಗೆ ಅಪ್ಪ ಸೇವೆ ನಡೆಯಿತು.

ಬಳಿಕ ಅನಂತೋಡಿ ಯಕ್ಷ ಮಿತ್ರ ಇವರ ಸಹಕಾರದಲ್ಲಿ ಮಂಗಳೂರು ಕಳವಾರು ಬಾಳ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಪರೆಕೆದ ಕೊಂದೆಪೇರ್ ಯಕ್ಷಗಾನ ಬಯಲಾಟ ಜರಗಿತು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು, ವ್ಯವಸ್ಥಾಪನ ಸಮಿತಿ ಸದಸ್ಯರು, ಮಹಿಳಾ ಸಮಿತಿಯ, ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here