ಪಾರೆಂಕಿ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ

0

ಮಡಂತ್ಯಾರು : ಶ್ರೀ ಕ್ಷೇತ್ರ ಪಾರೆಂಕಿ ಮಹಿಷಮರ್ದಿನಿ ಅಮ್ಮನವರ ವಾರ್ಷೀಕ ಜಾತ್ರಾ ಮಹೋತ್ಸವವು ಫೆಬ್ರವರಿ 4 ರಂದು ನಡೆಯಲಿದ್ದು ಪೂರ್ವಭಾವಿ ಸಭೆಯು ಜ.14ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷ ಸ್ಥಾನವನ್ನು ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಹಾಗೂ ಆಡಳಿತ ಮೋಕ್ತೇಸರಾರದ ಯಂ ವಿಠಲ ಶೆಟ್ಟಿ ಮುಡಾಯೂರು ವಹಿಸಿದ್ದರು. ಪ್ರಧಾನ ಅರ್ಚಕರಾದ ಟಿ.ವಿ ಶ್ರೀಧರ ರಾವ್ ಪೇಜಾವರ , ಸಹ ಮುಕ್ತೇಸರರಾದ ಸುಬ್ರಹ್ಮಣ್ಯ ಬಳ್ಳಾಲ್ , ಶ್ರೀಮತಿ ವೇದಾವತಿ ಶ್ರೀಧರ ಆಚಾರ್ಯ , ಬೇಬಿ ಆನಂದ ಮೂಲ್ಯ ವೇದಿಕೆಯಲ್ಲಿದ್ದರು. ಆಡಳಿತ ಮೋಕ್ತೇಸರಾರದ ಯಂ ವಿಠಲ ಶೆಟ್ಟಿ ಮುಡಾಯೂರು ಗ್ರಾಮಸ್ಥರ ಸಹಕಾರವನ್ನು ಕೋರಿದರು .

ಜಾತ್ರಾ ಮಹೋತ್ಸವದ ಅಂಗವಾಗಿ ಅನೇಕ ಸಮಿತಿಗಳನ್ನು ರಚಿಸಲಾಯಿತು .ಜಾತ್ರಾ ಮಹೋತ್ಸವದ ಅಂಗವಾಗಿ ಹೊರೆ ಕಾಣಿಯನ್ನು ಫೆಬ್ರವರಿ 3 ರಂದು ವಿಜೃಂಭಣೆ ಯಿಂದ ಮೆರವಣಿಗೆ ಯ ಮೂಲಕ ಮಡಂತ್ಯಾರಿನ ಗಣಪತಿ ಮಂಟಪದಿಂದ ತರುವುದಾಗಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಜೀರ್ಣೋದ್ದಾರ ಕಮಿಟಿಯ ಅಧ್ಯಕ್ಷರಾದ ಸಾಂತಪ್ಪ ಗೌಡ , ಬಿ.ಜಯಂತ ಶೆಟ್ಟಿ , ಕಾಂತಪ್ಪ ಗೌಡ , ಕೀಶೋರ ಶೆಟ್ಟಿ ಮುಡಾಯೂರು , ತುಲಸಿ ದಾಸ್ ಪೈ , ಅಶೋಕ್ ಗುಂಡಿಯಲ್ಕೆ , ತುಲಸಿ ಜಿ ಹಾರಬೆ ಹಾಗೂ ಇತರರು ಭಾಗವಹಿಸಿ ಸಲಹೆ ಗಳನ್ನು ನೀಡಿದರು.ಪಾರೆಂಕಿ , ಕುಕ್ಕಳ , ಮಾಲಾಡಿ, ಸೋಣಂದೂರು ಗ್ರಾಮದ ಅನೇಕ ಹಿರಿಯರು ಹಾಗೂ ಅಧಿಕ ಸಂಖ್ಯೆಯಲ್ಲಿ ಕ್ಷೇತ್ರದ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದರು.

LEAVE A REPLY

Please enter your comment!
Please enter your name here