ಬರೆಂಗಾಯ: ನೂತನ ಹುಲಿ ರಥದ ಮೆರವಣಿಗೆ

0

ನಿಡ್ಲೆ: ಕೊಡಂಗೆ ಶ್ರೀ ಭಟಾರಿ ಯಾನೆ ಮಲೆದೇವತೆ ಕ್ಷೇತ್ರಕ್ಕೆ ನೂತನವಾಗಿ ನಿರ್ಮಿಸಿದ ಹುಲಿ ರಥವನ್ನು ಕಂಬರಂಡ ಚಂದ್ರಯ್ಯ ಆಚಾರ್ಯ ರವರ ಮನೆಯಿಂದ ಕ್ಷೇತ್ರಕ್ಕೆ ಮೆರವಣಿಗೆಯ ಮೂಲಕ ಡಿ.27 ರಂದು ತರಲಾಯಿತು.

ಪೂಜಾ ವಿಧಿ ವಿಧಾನ ಮುಗಿದ ಬಳಿಕ ಮೆರವಣಿಗೆಯು ಪ್ರಾರಂಭಗೊಂಡಿತು. ಮೆರವಣಿಗೆಯಲ್ಲಿ ಬೈಕ್, ರಿಕಾ, ಕಾರುಗಳು ಪಾಲ್ಗೊಂಡಿದ್ದವು. ಈ ಸಂದರ್ಭದಲ್ಲಿ ವಿಶ್ವಸ್ಥ ಮಂಡಳಿ ಅಧ್ಯಕ್ಷ ವಿಶ್ವನಾಥ ರಾವ್ ಹಿರ್ತಡ್ಕ, ಪ್ರತಿಷ್ಠಾ ಕಲಶೋತ್ಸವ ಸಮಿತಿ ಅಧ್ಯಕ್ಷ ಮಧುಕರ ರಾವ್ ಮಚ್ಚಳೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಕಜೆ, ವಿವಿಧ ಸಮಿತಿಗಳ ಪದಾಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here