ಕೊಯ್ಯೂರು ಸ. ಪ. ಪೂ.ಕಾಲೇಜಿನಲ್ಲಿ ವಾಣಿಜ್ಯ ಸಂಘದ ಉಪನ್ಯಾಸ

0

ಕೊಯ್ಯೂರು : ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ‘ವಾಣಿಜ್ಯ ಸಂಘ’ದ ಆಶ್ರಯದಲ್ಲಿ ವಿಶೇಷ ಉಪನ್ಯಾಸ ಜರುಗಿತು. ಕೊಯ್ಯೂರು ಫೆಡರಲ್ ಬ್ಯಾಂಕಿನ ಮ್ಯಾನೇಜರ್ ಸಾಗರ್ ವರದಾಯಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ‘ಬ್ಯಾಂಕಿಂಗ್ ಕ್ಷೇತ್ರ ಮತ್ತು ವೃತ್ತಿ ಅವಕಾಶಗಳು’ ಎಂಬ ವಿಷಯದ ಕುರಿತು ಮಾಹಿತಿ ಉಪನ್ಯಾಸ ನೀಡಿದರು.

ಶಿವ ಸೆಲ್ವನ್ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಬಾಲಕೃಷ್ಣ ಬೇರಿಕೆ ಸಭಾಧ್ಯಕ್ಷತೆ ವಹಿಸಿದ್ದರು. ವಾಣಿಜ್ಯಸಂಘದ ನಿರ್ದೇಶಕಿ ಉಪನ್ಯಾಸಕಿ ಭವ್ಯಾ ಎಂ. ಪ್ರಾಸ್ತಾವಿಕ ಮಾತನಾಡಿದರು. ವಾಣಿಜ್ಯ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ಸುಹಾಯಿಲ್ ಮತ್ತು ವೇದಾನಂದ ಉಪಸ್ಥಿತರಿದ್ದರು.

ಭರತೇಶ್ ಸ್ವಾಗತಿಸಿ, ಅಭಿಷೇಕ್ ಅತಿಥಿ ಪರಿಚಯ ಮಾಡಿದರು. ಪವಿತ್ ಕುಮಾರ್ ವಂದಿಸಿದರು. ಉದಯಕುಮಾರ್, ಅಶ್ವಿನ್, ಉಮೇಶ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here