ಬೆಳ್ತಂಗಡಿ:ಕೆಎಸ್‌ಎಮ್‌ಸಿಎ ಹಾಗೂ ಬೆಳ್ತಂಗಡಿ ಧರ್ಮಪ್ರಾಂತ್ಯ ಆಶ್ರಯದಲ್ಲಿ ಕ್ರಿಸ್ಮಸ್ ಆಚರಣೆ ಮತ್ತು ಬೃಹತ್ ಜಾಥಾ

0

ಬೆಳ್ತಂಗಡಿ; ಕರ್ನಾಟಕ ಸೀರೋ ಮಲಬಾರ್ ಕ್ಯಾಥೊಲಿಕ್ ಅಸೋಸಿಯೇಷನ್ (ಕೆಎಸ್‌ಎಮ್‌ಸಿಎ), ಬೆಳ್ತಂಗಡಿ ಧರ್ಮಪ್ರಾಂತ್ಯ ಮತ್ತು ಭಕ್ತ ಸಂಘಟನೆಗಳ ಆಶ್ರಯದಲ್ಲಿ ಕ್ರಿಸ್ಮಸ್ ಬೆಲ್ಸ್ -2022 ಸಾರ್ವಜನಿಕರ ಕ್ರಿಸ್ಮಸ್ ಆಚರಣೆ ಮತ್ತು ಬೃಹತ್ ಜಾಥಾ ಡಿ.21 ರಂದು ಬೆಳ್ತಂಗಡಿ ಎಸ್‌ಡಿಎಂ ಕಲಾಭವನದಲ್ಲಿ ಜರುಗಿತು.

ಧರ್ಮಪ್ರಾಂತ್ಯದ ವ್ಯಾಪ್ತಿ ಜಾಥಾ ಆಲ್ ಇಂಡಿಯಾ ಕ್ಯಾಥೊಲಿಕ್ ಯೂನಿಯನ್ ಕರ್ನಾಟಕ ರಾಜ್ಯಾಧ್ಯಕ್ಷ, ನ್ಯಾಯವಾದಿ ಸೇವಿಯರ್ ಪಾಲೇಲಿ ಚಾಲನೆ ನೀಡಿದರು.
ಕಾರ್ಯಕ್ರಮದ ನಿಮಿತ್ತ ಆಕರ್ಷಕ ಕರೋನ್ ಸ್ಪರ್ಧೆ, ಸಾಂತಾಕ್ಲಾಸ್ ಸ್ಪರ್ಧೆ, ಕೇಕ್ ಬೇಕಿಂಗ್ ಸ್ಪರ್ಧೆಗಳು‌ ಹಾಗೂ ಧರ್ಮ ಭಗಿನಿಯರಿಗೆ ಪ್ರತ್ಯೇಕವಾಗಿ ಕರೋನ್ ಸ್ಪರ್ಧೆ ನಡೆಯಿತು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಕೆಎಸ್‌ಎಮ್‌ಸಿಎ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ ವಹಿಸಿದ್ದರು.
ಸಮಾರಂಭದಲ್ಲಿ ಕೆಎಸ್‌ಎಮ್‌ಸಿಎ ಕಾರ್ಯದರ್ಶಿ ಎಂ.ಜೆ ಸೆಬಾಸ್ಟಿಯನ್, ಸಾರ್ವಜನಿಕ ಸಂಪರ್ಕಾಧುಕಾರಿ ಪಿ.ಸಿ ಸೆಬಾಸ್ಟಿಯನ್, ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫಾ. ಜೋಸ್ ವಲಿಯಪರಂಬಿಲ್, ಫಾ. ಜೋಸೆಫ್ ಮಟ್ಟಂ, ವಿವಿಧ ವಿಭಾಗಗಳ ಪ್ರಮುಖರಾದ ಫಾ. ಶಾಜಿ ವೆಟ್ಟಂತಡತ್ತಿಲ್, ಬಿನೋಯ್ ಎ.ಜೆ, ಫಾ. ಜೋಸೆಫ್ ಚೀರನ್, ಸುನಿಲ್ ಪೌಲ್, ವಿ.ಟಿ‌ ಸೆಬಾಸ್ಟಿಯನ್, ರೆಜಿ, ಜೈಸನ್ ಪಟ್ಟೇರಿಲ್ ಧರ್ಮಸ್ಥಳ, ಸಂದೇಶ್ ಉದನೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here