ಡಿ.18ರಂದು ನಡೆದ ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘದ ಚುನಾವಣೆಯಲ್ಲಿ ನಿರ್ದೇಶಕರಾಗಿ ಬಹುಮತದಿಂದ ಆಯ್ಕೆ

0

ಬೆಳ್ತಂಗಡಿ : ಬೆಳ್ತಂಗಡಿ ಕಥೋಲೀಕ್ ಕ್ರೇಡಿಟ್ ಸಹಕಾರ ಸಂಘಕ್ಕೆ ಡಿ. 18ರಂದು ಬೆಳ್ತಂಗಡಿ ಚರ್ಚ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಮಾನ್ಯ ಸ್ಥಾನಕ್ಕೆ 10 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೇಮ್ಸ್ ಡಿಸೋಜ ಬೆಳ್ತಂಗಡಿ, ಹೆರಾಲ್ಡ್ ಪಿಂಟೊ ಉಜಿರೆ, ಜೋಸೆಫ್ ಪೀಟರ್ ಸಲ್ದಾನ್ಹ ಬೆಳ್ತಂಗಡಿ, ಅಲ್ಫೋನ್ಸ್ ರೊಡ್ರಿಗಸ್ ಅಳದಂಗಡಿ, ವಿನ್ಸೆಂಟ್ ಪ್ರಕಾಶ್ ಪಿಂಟೊ ಬೆಳ್ತಂಗಡಿ, ತೋಮಸ್ ಆರ್ . ನೋರೋನ್ನ ವೇಣೂರು, ಡೇನಿಸ್ ಸಿಕ್ವೇರಾ ವೇಣೂರು, ಪ್ರಸಾದ್ ಪಿಂಟೊ ಅಳದಂಗಡಿ, ರಪಾಯಲ್ ವೇಗಸ್ ಬದ್ಯಾರ್ ಬಹುಮತದಿಂದ ಜಯಗಳಿಸಿದ್ದಾರೆ.

ಹಿಂದುಳಿದ ‘ಪ್ರ ‘ವರ್ಗದಿಂದ ಒಂದು ಅಭ್ಯರ್ಥಿ ನಾಮ ಪತ್ರ ಸಲ್ಲಿಸಿದ್ದು ಬೆಳ್ತಂಗಡಿಯ ಹೆನ್ರಿ ಲೋಬೊರವರು ಮತ್ತು ಮಹಿಳಾ ಮೀಸಲು ಸ್ಥಾನ ದಿಂದ ಇಬ್ಬರು ನಾಮ ಪತ್ರ ಸಲ್ಲಿಸಿದ್ದು ಪೌಲಿನ್ ರೇಗೊ ಪನೇಜಾಲು ಮತ್ತು ಪ್ಲಾವಿಯ ಡಿಸೋಜ ಬೆಳ್ತಂಗಡಿ ಇವರು ಡಿ.11ರಂದು ನಾಮ ಪತ್ರ ಪರಿಶೀಲನಾ ವೇಳೆ ಅಂತಿಮ ಕಣ ದಲ್ಲಿದ್ದು ಬೇರೆ ಯಾರೂ ನಾಮ ಪತ್ರ ಸಲಿಸದಿರುವುದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ ಮಂಗಳೂರಿನ ವಿಲಾಸ್ ರವರು ಮತ್ತು ಅವರ ತಂಡ ಸಿಸ್ತುಬದ್ದವಾದ ಕ್ರಮದಲ್ಲಿ ಚುನಾವಣೆಯನ್ನು ನಡೆಸಿ ಕೊಟ್ಟರು, ಬೆಳ್ತಂಗಡಿ ಕಥೊಲಿಕ್ ಕ್ರೇಡಿಟ್ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವನಾಧಿಕಾರಿ ಐವನ್ ಗೊಂಸಲ್ವಿಸ್, ಹಾಗು ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here