ಬೆಳ್ತಂಗಡಿ: ವರ್ಗಾವಣೆಗೊಂಡ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಗಳಿಗೆ ಬೀಳ್ಕೊಡುಗೆ ಸಮಾರಂಭ

0

ಬೆಳ್ತಂಗಡಿ: ಪೊಲೀಸ್ ಠಾಣೆಯಿಂದ ಪುತ್ತೂರು ಗ್ರಾಮಾಂತರ ಠಾಣೆಗೆ ವರ್ಗಾವಣೆ ಗೊಂಡ ಪಿಸ್ಐ ರಾಮಕೃಷ್ಣ ,ಧರ್ಮಸ್ಥಳ ಠಾಣೆಗೆ ವರ್ಗಾವಣೆ ಗೊಂಡ ಲಾರೆನ್ಸ್ ಪಿಆರ್.ಮತ್ತು ಮಲ್ಲಿಕಾರ್ಜುನ,ಬೆಳ್ತಂಗಡಿ ಸಂಚಾರ ಠಾಣೆಗೆ ವರ್ಗಾವಣೆಗೊಂಡ ಅರುಣ್ ಚವ್ಹಾಣ್ ರವರಿಗೆ,ಬಂಟ್ವಾಳ ನಗರ ಠಾಣೆಗೆ ವರ್ಗಾವಣೆ ಗೊಂಡ ಮಂಜುನಾಥ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಬೆಳ್ತಂಗಡಿ ಸಿವಿಸಿ ಹಾಲ್ ನಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ಡಿ.16 ರಂದು ನಡೆಯಿತು.

ವೇದಿಕೆಯಲ್ಲಿ ಬೆಳ್ತಂಗಡಿ ಪಿಎಸ್ಐ ಗಳಾದ ನಂದಕುಮಾರ್, ಅರ್ಜುನ್ ಹೆಚ್,ಧರ್ಮಸ್ಥಳ ಪಿಎಸ್ಐ ಅನಿಲ್ ಕುಮಾರ್ ಉಪಸ್ಥಿತರಿದ್ದರು. ಬೆಳ್ತಂಗಡಿ ಠಾಣಾ ಸಿಬ್ಬಂದಿ ಪಿಎಸ್ ವೆಂಕಪ್ಪ ರವರು ನಿರೂಪಿಸಿದ ಕಾರ್ಯಕ್ರಮಕ್ಕೆ ಎಎಸ್ಐ ಶ್ರೀ ರಾಮಯ್ಯ ಹೆಗ್ಡೆ ಸ್ವಾಗತಿಸಿ ಸಿಬ್ಬಂದಿ ಕು.ಚೈತ್ರಾ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here