ನವೋದಯ ಸಂಘದ ಪುರುಷ ಸದಸ್ಯರಿಗೆ ಸಮವಸ್ತ್ರ ವಿತರಣೆ

0


ಬೆಳ್ತಂಗಡಿ : ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ನವೋದಯ ಸ್ವ ಸಹಾಯ ಸಂಘಗಳ ಪುರುಷ ಸದಸ್ಯರಿಗೆ ಸಮ ವಸ್ತ್ರ ವಿತರಣೆ ಮತ್ತು ಸಮಾವೇಶದ ಕುರಿತು ಸಮಾಲೋಚನಾ ಸಭೆ ಬೆಳ್ತಂಗಡಿ ಶಾಖೆಯ ಸಭಾಂಗಣದಲ್ಲಿಡಿ.6 ರಂದು ನಡೆಯಿತು.

ಮಂಗಳೂರು ದ. ಕ. ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ನಿರಂಜನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಇನ್ನೊರ್ವ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೊಟ್ಟು, ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ಸತೀಶ್ ಕೆ., ನವೋದಯ ಸ್ವ ಸಹಾಯ ಸಂಘದ ಜಿಲ್ಲಾ ಮೇಲ್ವಿಚಾರಕ ರಂಜಿತ್ ಕುಮಾರ್, ವಲಯ ಮೇಲ್ವಿಚಾರಕ ಸಂದೇಶ್, ತಾಲೂಕು ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ತಾಲೂಕು ನವೋದಯ ಸ್ವ ಸಹಾಯ ಸಂಘಗಳ ಮೇಲ್ವಿಚಾರಕರುಗಳು,ಸ್ವ ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

ಬೆಳ್ತಂಗಡಿ ಶಾಖೆಯಶಾಖಾಧಿಕಾರಿ ಮಹೇಶ್ ಕುಮಾರ್ ಬಿ. ಸ್ವಾಗತಿಸಿದರು ವಲಯ ಮೇಲ್ವಿಚಾರಕ ಸಿರಾಜುದ್ದಿನ್ ನಿರೂಪಿಸಿ ವಲಯ ಮೇಲ್ವಿಚಾರಕ ಸ್ಟೇನಿ ಪಿಂಟೋ ವಂದಿಸಿದರು

LEAVE A REPLY

Please enter your comment!
Please enter your name here