ಪುಂಜಾಲಕಟ್ಟೆ- ಮಡಂತ್ಯಾರಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪ್ರಾರಂಭಿಸುವ ಮುನ್ನ ಹತ್ತಿರದ ಕಟ್ಟಡ ಮಾಲೀಕರಿಗೆ ಮಾಹಿತಿ ಕೊಡಿಸುವಂತೆ ಶಾಸಕರಲ್ಲಿ ವರ್ತಕರ ಸಂಘದಿಂದ ಮನವಿ

0

ಬೆಳ್ತಂಗಡಿ: ಪುಂಜಾಲಕಟ್ಟೆ ಮಡಂತ್ಯಾರಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯು ಪ್ರಸ್ತುತ ಸರ್ವೆಯವರ ಕೆಲಸಗಳು ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಈ ವಿಷಯದಲ್ಲಿ ವರ್ತಕ ಬಂಧುಗಳಿಗೆ ಅಥವಾ ಆ ಹೆದ್ದಾರಿಯ ಪಕ್ಕದಲ್ಲಿರುವ ಕಟ್ಟಡ ಮಾಲೀಕರು ವರ್ತಕರು ಅಥವಾ ಮನೆ ಮಾಲಿಕರಿಗೆ ಸರಿಯಾದ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಕೊಡುವ ಮಾಹಿತಿಗಳಲ್ಲಿ ಸ್ಪಷ್ಟತೆಯು ಇರುವುದಿಲ್ಲ .ಈ ನಿಟ್ಟಿನಲ್ಲಿ ವರ್ತಕರ ಸಂಘದಿಂದ ತಾಲೂಕಿನ ಶಾಸಕರನ್ನು ಮತ್ತು ಈ ಕಾಮಗಾರಿಯ ಇಂಜಿನಿಯರ್, ಟೆಂಡರ್ ಪಡೆದಿರುವ ಕಂಪನಿ ಮತ್ತು ಸಂಬಂಧಪಟ್ಟ ಇಲಾಖೆಗಳನ್ನೆಲ್ಲ ಒಟ್ಟಾಗಿ ಸೇರಿಸಿ ಜನ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ, ಡಿ.5ರಂದು ಶಾಸಕರನ್ನು ಭೇಟಿ ಮಾಡಲಾಯಿತು.

ಈ ವೇಳೆ ಶಾಸಕರು 10 ದಿನದ ಒಳಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಹಕರಿಸುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಯಂತ ಶೆಟ್ಟಿ ಬಿ, ಉಪಾಧ್ಯಕ್ಷರಾದ ಯೋಗೀಶ್ ಕಡ್ರಿಲ, ಹೈಧರ್ ಕೋಶಾಧಿಕಾರಿಗಳಾದ ಪ್ರಶಾಂತ್ ಶೆಟ್ಟಿ ಮುಡಾಯೂರು, ಕಾಂತಪ್ಪ ಗೌಡರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here