ಸುಳ್ಯ ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ 7 ನೇ ವರ್ಷದ ವಾರ್ಷಿಕೋತ್ಸವದ ಪೂರ್ವ ಭಾವಿ ಸಭೆಯು ನಡೆಯಿತು.
ವಾರ್ಷಿಕೋತ್ಸವದ ಅಂಗವಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮ ನ.12 ರಂದು ಯುವಜನ ಸಂಯುಕ್ತ ಮಂಡಳಿ ಎದುರಿನ ಜೆ.ಒ.ಸಿ ಮೈದಾನದಲ್ಲಿ ನಡೆಸುವುದಾಗಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿಸಂಘದ ಗೌರವಾಧ್ಯಕ್ಷ ಎಸ್. ಪಿ. ಲೋಕನಾಥ್, ಅಧ್ಯಕ್ಷ ಗಿರಿಧರ್ ಸ್ಕಂದ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ (ಸ್ವಾತಿ ) ಜೊತೆ ಕಾರ್ಯದರ್ಶಿ ಶಿವಪ್ರಕಾಶ್, ಖಜಾಂಜಿ ಮಧುಸೂಧನ್ ನಾಯರ್, ಉಪಾಧ್ಯಕ್ಷ ಜಿ. ಎ ಮಹಮ್ಮದ್, ಶರತ್ ಕುಮಾರ್, ಶಾಫಿ ಪೈಚಾರ್ (ಪ್ರಗತಿ), ರಾಜೇಶ್ ಕಡಬ, ಗುರುದತ್ ನಾಯಕ್ (ಗುರು ಶಾಮಿಯಾನ), ಚಂದ್ರಶೇಖರ್ ಪಂಜ, ರವಿಪ್ರಕಾಶ್, ರಕ್ಷಿತ್, ರೇಗನ್ ಹರಿಹರ, ಹಸನ್ ಸುಳ್ಯ, ವೆಂಕಟ್ರಮಣ ಅರಂತೋಡು, ಸತೀಶ್ ಕಲ್ಲುಗುಂಡಿ, ವಿಶ್ವನಾಥ್ ಕೆದಿಲ, ಜಯಂತ್ ಮಂಡೆಕೋಲು, ಶ್ರೀಧರ (ಸ್ವಾಮಿ) ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.