ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಬೈದರುಗಳ ಗರಡಿಯಲ್ಲಿ ದೀಪಾವಳಿ ಆಚರಣೆ ಪ್ರಯುಕ್ತ ವಿಶೇಷ ಪೂಜೆ, ಬಲಿಯೇಂದ್ರ ಪೂಜೆ, ದರ್ಶನ ಸೇವೆ, ತಂಬಿಲ ಸೇವೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಶ್ರೀಮತಿ ಪದ್ಮಾ ಆರ್. ಶೆಟ್ಟಿ, ಉಡುಪಿ ಶ್ರೀಧರ್ ಕೋಟ್ಯಾನ್, ನಾಗೇಶ್ ಆಳ್ವ, ಸುಧೀರ್ ಕುಮಾರ್ ಶೆಟ್ಟಿ, ರಘುನಾಥ ರೈ ಅಲೆಂಗಾರ, ಸುದೀನ್ ಕುಮಾರ್ ರೈ, ರಘುನಾಥ ರೈ ಪಂಜಿಮೊಗರು, ಎನ್. ಜಿ. ಲೋಕನಾಥ ರೈ ಪಟ್ಟೆ, ಎನ್. ಜಿ. ಪ್ರಭಾಕರ ರೈ ಪಟ್ಟೆ ಹಾಗೂ ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.