ಭಾರತ್ ಆಗ್ರೋ ಹೌಸ್ನಲ್ಲಿ ದೀಪಾವಳಿ ಪ್ರಯುಕ್ತ ಗಣಪತಿ ಹವನ ಹಾಗೂ ಧನಲಕ್ಷ್ಮಿ ಪೂಜೆ ಇಂದು ನಡೆಯಿತು. ಪುರೋಹಿತ ನಾಗರಾಜ ಭಟ್ರವರು ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ನ ಅಧ್ಯಕ್ಷ ಚಂದ್ರಶೇಖರ ಪೇರಾಲ್, ರೋಟರಿ ಕ್ಲಬ್ನ ಗೌರವಾಧ್ಯಕ್ಷರು, ಪದಾಧಿಕಾರಿಗಳು, ಹಿತೈಷಿಗಳು, ಗ್ರಾಹಕರು ಉಪಸ್ಥಿತರಿದ್ದರು. ಭಾರತ್ ಆಗ್ರೋ ಹೌಸ್ನ ಸಿಬ್ಬಂದಿಗಳಿಗೆ ಬೋನಸ್ ಹಾಗೂ ಗಿಫ್ಟ್ ವಿತರಿಸಲಾಯಿತು. ಭಾರತ್ ಆಗ್ರೋ ಹೌಸ್ನ ಮಾಲಕ ರಾಮಚಂದ್ರ ಪಿ. ದಂಪತಿಗಳು ಎಲ್ಲರನ್ನು ಸ್ವಾಗತಿಸಿದರು.